ಮನ ತಣ್ಣಿಸುವ ಸಂಗೀತ ಕಾರ್ಯಕ್ರಮ

ಮನ ತಣ್ಣಿಸುವ ಸಂಗೀತ ಕಾರ್ಯಕ್ರಮ

ಧಾರವಾಡ, ಜ. 06: ಸಂಗೀತ ಮೈಮನ ತಣ್ಣಿಸುತ್ತದ್ದೆ ಎಲ್ಲರನ್ನೂ ಮೈ ಮರೆಸುತ್ತದೆ ಅಂತಹುದ್ದೇ ಕಾರ್ಯಕ್ರಮವನ್ನು ಧಾರವಾಡ ಕುಮಾರೇಶ್ವರ ನಗರದ ಶಿವಾಲಯ ಆವರಣದಲ್ಲಿ ಸನ್ನಿಧಿ ಮಹಿಳಾ ಮಂಡಳಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹೊಸ ಚಿಗುರು ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ವಿದೂಶಿ ಶ್ರೀ ಮತಿ ಭಾರ್ಗವಿ ಕುಲಕರ್ಣಿ ಹಾಗೂ ಶಿಷ್ಯವೃಂದದವರು ಸಂಗೀತ ಪ್ರೇಮಿಗಳ ಮನ ತಣಿಸುವ ಮೂಲಕ ಸಂಗೀತ ಕಾರ್ಯಕ್ರಮವನ್ನು ನೆರವೇರಿಸಿದರು. ಇನ್ನೂ ಕಾರ್ಯಕ್ರಮದಲ್ಲಿ ಮಕ್ಕಳ ಕಲ್ಯಾಣ ಸಮಿತಿ ನಿರ್ದೆಶಕರಾದ ರಾಜೆಶ್ವರಿ ಸಾಲಡಟ್ಟಿ, ಕುರುಬ ಸಂಘದ ನಿರ್ದೇಶಕ ಬಸವರಾಜ ಮಲಕಾರಿ, ಹಾಗೂ ಸಮಾಜ ಸೇವಕಿ ನಂದಾ ಗುಳೇದಗುಡ್ಡ ಅವರಿಗೆ ಸನ್ಮಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಕರ್ನಾಟಕ ನೃತ್ಯ ಅಕಾಡೆಮಿ ಸದಸ್ಯ ಈರಣ್ಣ ಪತ್ತಾರ, ಎಂ. ಈಶ್ವರಯ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos