ಏರೋ ಇಂಡಿಯಾದಲ್ಲಿ ಬೆಂಕಿ ಅನಾಹುತದ ಕುರಿತು ಸಮಗ್ರ ತನಿಖೆ: ಎಂ.ಬಿ.ಪಾಟೀಲ್

ಏರೋ ಇಂಡಿಯಾದಲ್ಲಿ ಬೆಂಕಿ ಅನಾಹುತದ ಕುರಿತು ಸಮಗ್ರ ತನಿಖೆ: ಎಂ.ಬಿ.ಪಾಟೀಲ್

ಕಲಬುರಗಿ: ಏರೋ ಇಂಡಿಯಾ
ವೈಮಾನಿಕ ಪ್ರದರ್ಶನ ನಡೆಯುತ್ತಿರುವ ಯಲಹಂಕ ವಾಯುನೆಲೆಯ ಪಾರ್ಕಿಂಗ್ ಸ್ಥಳದಲ್ಲಿ ಸಂಭವಿಸಿದ ಬೆಂಕಿ
ಅನಾಹುತದ ಕುರಿತು ಸಮಗ್ರ ತನಿಖೆ ನಡೆಸಲಾಗುವುದು ಎಂದು ಗೃಹ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಅವರು, ತನಿಖೆ ನಂತರ ತಪ್ಪಿಸ್ಥರ ಮೇಲೆ ಕ್ರಮ
ತೆಗೆದುಕೊಳ್ಳಲಾಗುವುದು.  ಬಯಲು ಪ್ರದೇಶ, ಜತೆಗೆ ಒಣಹುಲ್ಲು
ಇದ್ದ ಕಾರಣದಿಂದ ಈ ದುರಂತ ಸಂಭವಿಸಿದೆ. ಇಂತಹ ಘಟನೆ ನಡೆದಿರುವುದು ನೋವು ತಂದಿದೆ ಎಂದರು.

ಜೀವರಕ್ಷಣೆಗೆ ಮೊದಲ ಆದ್ಯತೆ ನೀಡಲಾಗಿದೆ. ಅಗ್ನಿಶಾಮಕ ದಳದ ಡಿಜಿಪಿ ಎಂ.ಎನ್.ರೆಡ್ಡಿ
ಅವರಿಂದ ಮಾಹಿತಿ ಪಡೆದಿದ್ದು, ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆಯೂ ಸಹ ಸೂಚಿಸಲಾಗಿದೆ
ಎಂದು ಎಂ.ಬಿ.ಪಾಟೀಲ್ ತಿಳಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos