ರಾಯಚೂರು, ಅ. 15: ಕಳೆದ ಮೂರು ತಿಂಗಳಿಂದ ರಾಯಚೂರು ನಗರ ಸೇರಿದಂತೆ ಜಿಲ್ಲೆಯ ವಿವಿಧ ಪಟ್ಟಣಗಳಲ್ಲಿ ಹಿಡಿದ 500 ಕ್ಕೂ ಹೆಚ್ಚು ಬಿಡಾಡಿ ದನಗಳನ್ನು ತಾಲೂಕಿನ ಅಲ್ಕೂರು ಗ್ರಾಮದ ಗೋಶಾಲೆಗೆ ಕಳುಹಿಸಲಾಯಿತು.
ರಸ್ತೆಯಲ್ಲಿ ತಿರಗಾಡುತಿದ್ದ ದನಗಳನ್ನು ಪೊಲೀಸ್ ಮತ್ತು ನಗರಸಭೆಯ ಅಧಿಕಾರಿ ಸಿಬ್ಬಂದಿಯ ಸಹಯೋಗದಲ್ಲಿ ಕೂಡಿ ಹಾಕಿದ್ದರು. ಸೋಮವಾರ ರಾತ್ರಿ ಪೊಲೀಸರು, ಸ್ಥಳೀಯ ಸಂಸ್ಥೆ ಸಿಬ್ಬಂದಿ ಲಾರಿಗಳ ಮೂಲಕ ಗೋಶಾಲೆಗೆ ಕರೆದೋಯ್ದರು. ರಾಯಚೂರು ನಗರ, ಸಿರವಾರ, ಮಸ್ಕಿಯಲ್ಲಿ ಹಿಡಿದ ಜಾನುವಾರುಗಳನ್ನು ಯರಗೇರಾ ಠಾಣಾ ವ್ಯಾಪ್ತಿಯಲ್ಲಿ ಬರುವ ಅಲ್ಕೂರು ಗೋ ಶಾಲೆಗೆ ಸಾಗಿಸಲಾಗಿದೆ.