ತುಮಕೂರು, ಅ. 18: ಗ್ರಾಮದ ಹೊರವಲಯದಲ್ಲಿ ಬುಧವಾರ ಸಂಜೆ ದನಗಳನ್ನು ಮೇಯಿಸುತ್ತಿದ್ದ ಲಕ್ಷ್ಮಮ್ಮ ರಾತ್ರಿ ಮನೆಗೆ ಹಿಂದಿರುಗಿರಲಿಲ್ಲ. ನೆರೆಹೊರೆಯವರು ಹುಡುಕಾಡಿದರೂ ಲಕ್ಷ್ಮಮ್ಮ ಪತ್ತೆಯಾಗಿರಲಿಲ್ಲ. ಗುರುವಾರ ಬೆಳಗ್ಗೆ ಗ್ರಾಮಸ್ಥರು ಪೊದೆಯಲ್ಲಿ ಲಕ್ಷ್ಮಮ್ಮ ಅವರ ಬಟ್ಟೆ ಕಂಡು ಅರಣ್ಯಾಧಿಕಾರಿ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದರು. ಅರಣ್ಯ ಇಲಾಖೆ ಸಿಬ್ಬಂದಿ ನೆರವಿನೊಂದಿಗೆ ಪೊಲೀಸರು ಮೃತದೇಹ ಪತ್ತೆಹಚ್ಚಿದ್ದು ತಲೆ, ಕುತ್ತಿಗೆ ಭಾಗವನ್ನು ಚಿರತೆ ತಿಂದಿದೆ.