ಯಾದಗಿರಿ, ಡಿ. 20 : ಟಿಪ್ಪರ್ ಹಾಯ್ದು 60 ಕುರಿಗಳು ಸಾವುಗೀಡಾದ ಘಟನೆ ಜಿಲ್ಲೆಯ ಸುರಪುರ ತಾಲೂಕಿನ ತಿಂಥಣಿ ಬ್ರಿಜ್ ಮೇಲೆ ನಡೆದಿದೆ.
ಬೆಳಗಿನಜಾವ 4.30 ವೇಳೆ ಸುಮಾರಿಗೆ ಘಟನೆ ಸಂಭವಿಸಿದೆ ಎನ್ನಲಾಗಿದೆ.
ಸುರಪುರ ತಾಲೂಕಿನ ಕಮಲಾಪುರ ಗ್ರಾಮದ ಕುರಿಗಾಹಿಗೆ ಸೇರಿದ ಕುರಿಗಳು ಎನ್ನುವ ಮಾಹಿತಿ ಲಭ್ಯವಾಗಿದೆ.
ಸುರಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ