ಐವರು ‘ಡಿಸಿಎಂ’ ಸೇರಿ 25 ಮಂದಿಗೆ ಸಚಿವರಾಗಿ ಮಣೆ!

ಐವರು ‘ಡಿಸಿಎಂ’ ಸೇರಿ 25 ಮಂದಿಗೆ ಸಚಿವರಾಗಿ ಮಣೆ!

ಅಮರಾವತಿ, ಜೂನ್. 8, ನ್ಯೂಸ್ ಎಕ್ಸ್ ಪ್ರೆಸ್ :  ಆಂಧ್ರ ಪ್ರದೇಶದ ವೈಎಸ್‌ಆರ್‌ ಕಾಂಗ್ರೆಸ್‌ ಸರ್ಕಾರದ ಸಂಪುಟ ರಚನೆಯಲ್ಲಿ ಐವರು ಉಪಮುಖ್ಯಮಂತ್ರಿಗಳು ಸೇರಿ 25 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. 25 ಮಂದಿ ವೈಎಸ್‌ಆರ್‌ ಕಾಂಗ್ರೆಸ್‌ ನಾಯಕರಿಗೆ ರಾಜ್ಯಪಾಲ ಈಎಸ್‌ಎಲ್‌ ನರಸಿಂಹನ್‌ ಅವರು ಪ್ರಮಾಣ ವಚನ ಬೋಧಿಸಿದರು. ಸಚಿವರಾಗಿರುವ 25 ಮಂದಿಯ ಪೈಕಿ 6 ಮಂದಿ ಅವಿಭಜಿತ ಆಂಧ್ರಪ್ರದೇಶದಲ್ಲಿ ವೈಎಸ್‌ ರಾಜಶೇಖರ್‌ ರೆಡ್ಡಿ ಅವರೊಂದಿಗೆ ಸಚಿವರಾಗಿ ಕೆಲಸ ಮಾಡಿದ್ದವರು. ಹಿರಿತನದ ಆಧಾರದಲ್ಲಿ ಜಗನ್‌ ಪ್ರಮುಖರಿಗೆ ಮಣೆ ಹಾಕಿದ್ದಾರೆ.

ಐವರು ಡಿಸಿಎಂಗಳಾದ ರಾಜಣ್ಣ ಡೋರಾ(ಎಸ್‌ಟಿ, ಸಾಲೂರ್‌) ಅಲ್ಲಾ ನಾಣಿ (ಕಾಪು ಜನಾಂಗ, ಈಳೂರು)ಪಾರ್ಥ ಸಾರಥಿ (ಯಾದವ, ಪೆನಮಾಲೂರು ವಿಜಯವಾಡಾ ) ಎಂ. ಸುಚರಿತ (ಎಸ್‌ಟಿ,ಗ ಗುಂಟೂರು)ಅಂಜದ್‌ ಬಾಷಾ (ಮುಸ್ಲಿಂ, ಕಡಪ) ಅವರಿಗೆ ಉಪಮುಖ್ಯಮಂತ್ರಿ ಹುದ್ದೆಗಳನ್ನು ನೀಡಲಾಗುತ್ತಿದೆ. ಜಗನ್‌ ಅವರು ಅಮರಾವತಿಯ ಮುಖ್ಯಮಂತ್ರಿ ಸಚಿವಾಲಯದಲ್ಲಿ ಅಧಿಕಾರ ವಹಿಸಿಕೊಂಡರು. ಈ ವೇಳೆ ಅರ್ಚಕರ ಮೂಲಕ ಪೂಜೆ ಸಲ್ಲಿಸಿದರು, ಬಳಿಕ ತಂದೆ, ಮಾಜಿ ಮುಖ್ಯಮಂತ್ರಿ ರಾಜಶೇಖರ್‌ ರೆಡ್ಡಿ ಅವರ ಭಾವಚಿತ್ರಕ್ಕೆ ನಮಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos