ಮಂಡ್ಯ, ಆ. 15 : 73ನೇ ಸ್ವಾತಂತ್ರ್ಯ ದಿನದ ಪ್ರಯುಕ್ತ ಮಂಡ್ಯ ಯೂತ್ ಗ್ರೂಪ್ 500 ಅಡಿ ಉದ್ದದ ತಿರಂಗ ಹಿಡಿದು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ್ದಾರೆ. ಇದು ಜನರ ಮೆಚ್ಚುಗೆಗೆ ಪಾತ್ರವಾಗಿದೆ. ತ್ರಿವರ್ಣ ಧ್ವಜದ ಮೆರವಣಿಗೆಗೆ ಗ್ರೂಪ್ ಅಧ್ಯಕ್ಷ ಡಾ.ಅನಿಲ್ ಆನಂದ್ ಚಾಲನೆ ನೀಡಿದರು. ಡಾ.ಯಾಶಿಕಾ ಅನಿಲ್ ಭಾರತ ಧ್ವಜ ಹಿಡಿದು ಮೆರವಣಿಗೆ ನೇತೃತ್ವ
ವಹಿಸಿದ್ದರು. ಶ್ವೇತ ವಸ್ತ್ರಧಾರಿಗಳಾಗಿ ಆಗಮಿಸಿದ್ದ ಗ್ರೂಪ್ನ ನೂರಾರು ಸದಸ್ಯರು ಧ್ವಜ ಹಿಡಿದು ವಂದೇಮಾತರಂ ಘೋಷಣೆ ಕೂಗುತ್ತಾ ಸಾಗಿದರು. ಆಸ್ಪತ್ರೆ ರಸ್ತೆಯ ಮೂಲಕ ಬೆಂಗಳೂರು-ಮೈಸೂರು ಹೆದ್ದಾರಿಗೆ ಆಗಮಿಸಿದ ತಿರಂಗ ಧ್ವಜದ ಮೆರವಣಿಗೆ ಹೆದ್ದಾರಿ ಮೂಲಕ ವಿಶ್ವೇಶ್ವರಯ್ಯ ರಸ್ತೆ, ಹೊಸಹಳ್ಳಿ ವೃತ್ತದ ಮೂಲಕ ಹಾದು ನೂರಡಿ ರಸ್ತೆಯಲ್ಲಿ ಅಂತ್ಯಗೊಂಡಿತು.
ಮೆರವಣಿಗೆಯುದ್ದಕ್ಕೂ ರಸ್ತೆಯ ಅಕ್ಕಪಕ್ಕ ನಿಂತ ನೂರಾರು ಜನರು ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಿದರು. ತಿರಂಗ ಹೆದ್ದಾರಿಯಲ್ಲಿ ಸಾಗುವಾಗಲೂ ವಾಹನಗಳಲ್ಲಿ ಪ್ರಯಾಣಿಸುತ್ತಿದ್ದ ಜನರು ಸ್ವಲ್ಪ ಕಾಲ ನಿಂತು ವೀಕ್ಷಣೆ ನಡೆಸಿ
ಮೆಚ್ಚುಗೆ ವ್ಯಕ್ತಪಡಿಸಿದರು. ರಾಷ್ಟ್ರಧ್ವಜ ಮೆರವಣಿಗೆ ಅಂತ್ಯಗೊಂಡ ನೂರಡಿ ರಸ್ತೆಯಲ್ಲಿ ಸಾರ್ವಜನಿಕರಿಗೆ ಸಿಹಿ
ವಿತರಿಸಲಾಯಿತು. ಮೆರವಣಿಗೆಯಲ್ಲಿ ಭಾಗವಹಿಸಿದ್ದವರೆಲ್ಲರಿಗೂ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು