ಧಾರವಾಡ, ಜ. 30: ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ರೈತ ಸೇನೆ ನೇತೃತ್ವದಲ್ಲಿ ರೈತರ ಪ್ರತಿಭಟನಾ ಧರಣಿ ಸತ್ಯಾಗ್ರಹ ಹೋರಾಟ ಇಂದು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ಕಳೆದ ನಾಲ್ಕು ದಿನಗಳಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹದಲ್ಲಿ ರೈತರು ಭಾಗವಹಿಸಿದ್ದಾರೆ.
ಇಂದು ಬೆಳಗ್ಗೆ ವೈದ್ಯಕೀಯ ಸಿಬ್ಬಂದಿಗಳು ಪ್ರತಿಭಟನಾ ಧರಣಿ ಸತ್ಯಾಗ್ರಹ ನಿರತ ರೈತರ ಆರೋಗ್ಯ ತಪಾಸಣೆ ಮಾಡಿದರು. ರೈತ ಸೇನಾ ಸರದಿ ಉಪವಾಸ ಪ್ರತಿಭಟನೆ ರೈತರ ಎಲ್ಲ ಬೆಳೆಗಳಿಗೆ ಸರ್ಕಾರದ ಖರೀದಿ ಕೇಂದ್ರ ತೆರೆಯುವಂತೆ ಒತ್ತಾಯಿಸಿ ನಡೆದಿರುವ ಪ್ರತಿಭಟನೆ ನಡೆಸಿದ್ದಾರೆ.
ರೈತ ಸೇನಾ ರಾಜ್ಯಾಧ್ಯಕ್ಷ ವಿರೇಶ ಸೊಬರದಮಠ ನೇತೃತ್ವದಲ್ಲಿ ನಡೆದಿರುವ ಪ್ರತಿಭಟನೆಯಲ್ಲಿ ಆರ್.ಎಚ್. ತಿಮ್ಮನಗೌಡರ, ಮಹೇಶ ನಾವಳ್ಳಿ, ಮಂಜುನಾಥ ಕಂಬಳಿ ಮತ್ತು ಮಂಜುನಾಥ ನಾವಳ್ಳಿಯಿಂದ ಉಪವಾಸ ಕುಳಿತಿದ್ದಾರೆ.