ಪೀಣ್ಯ ದಾಸರಹಳ್ಳಿ, ಸೆ. 27: ದಾಸರಹಳ್ಳಿ ಸಮೀಪ ಚೊಕ್ಕಸಂದ್ರ ವಾರ್ಡಿನ ನೆಲಗದರನಹಳ್ಳಿ ಕಾಳಿಕಾಂಬ ವಿಶ್ವಕಮ್ಮ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಮೂರನೇ ವರ್ಷದ ವಿಶ್ವಕರ್ಮ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ವಿಶ್ವಕರ್ಮ ನಿಗಮ ಮಂಡಳಿಯ ಮಾಜಿ ಅಧ್ಯಕ್ಷೆ ಸತ್ಯವತಿ, ಪಾಲಿಕೆ ಸದಸ್ಯ ಸರ್ವಮಂಗಳ ಸಿ.ಎಂ. ನಾಗರಾಜು, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಡಿ. ಬಿ. ಸುಕೀರ್ತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಜಗದೀಶ ಕುಮಾರ್, ಎಗ್ ನಳ್ಳಿ ವಾರ್ಡಿನ ಅಧ್ಯಕ್ಷ ಎನ್. ರಮೇಶ್ ಗೌಡ ಇನ್ನು ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.