ಮೈಸೂರು, ನ. 16: ವಿಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಚುನಾವಣಾ ಅಧಿಕಾರಿಗಳು, ಯೋಗೇಶ್ವರ್ ಭಾವಚಿತ್ರವಿರುವ 30 ಸಾವಿರ ಸೀರೆಗಳನ್ನು ವಶಪಡಿಸಿಕೊಂಡಿದ್ದಾರೆ.
ಹುಣಸೂರು ಉಪಚುನಾವಣೆಗೆ ಬಿಜೆಪಿ ಹೆಚ್. ವಿಶ್ವನಾಥ್ರನ್ನ ಕಣಕ್ಕಿಳಿಸಿದೆ. ಆದ್ರೆ ಸಿ.ಪಿ ಯೋಗೇಶ್ವರ್ ಕೂಡ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಸದ್ಯ ಮೈಸೂರಿನ ರಾಣಿ ಮದ್ರಾಸ್ ಫ್ಯಾಕ್ಟರಿ ಪಕ್ಕದ ಗೋಡೌನ್ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಸಿಪಿ.ಯೋಗೇಶ್ವರ್ ಭಾವಚಿತ್ರ ಹೊಂದಿರುವ ಸೀರೆಗಳು ಸಿಕ್ಕಿವೆ. ಘಟನೆ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.