ಬೆಂಗಳೂರು: ರಾಜಕೀಯದಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಉತ್ತಮ ಪ್ರಜಾಕೀಯ ಪಕ್ಷ ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರಗಳಲ್ಲಿಯೂ ಸ್ಪರ್ಧಿಸಲಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಉಪೇಂದ್ರ
ಹೇಳಿದ್ದಾರೆ.
ಇಂದು
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಮಗೇನೂ ಗೊತ್ತಿಲ್ಲ. ನಾವೇನೂ ಹೇಳಿಲ್ಲ. ನೀವು ಹೇಳುವುದನ್ನು ಬಿಟ್ಟು ಎಂಬ ಧ್ಯೇಯ ವಾಕ್ಯದೊಂದಿಗೆ ನಾವು ಚುನಾವಣೆಯಲ್ಲಿ ಸ್ಪರ್ಧಿಸಲಿದ್ದೇವೆ. ಬೇರೆ ಬೇರೆ ಪಕ್ಷದವರೆಲ್ಲ ಪ್ರಣಾಳಿಕೆಯಲ್ಲಿ ಆಶ್ವಾಸನೆಗಳನ್ನು ಹೇಳಿರುತ್ತಾರೆ. ನನ್ನ ಪ್ರಕಾರ ಅದು ತಪ್ಪು. ಜನರಿಗೆ ಏನು ಬೇಕು ಎನ್ನುವುದನ್ನು ಜನರಿಂದಲೇ ತಿಳಿದು ಕೆಲಸ ಮಾಡುತ್ತೇವೆ ಎಂದರು.
ನಾವು ಯಾವಾಗಲೂ ಪ್ರಜೆಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರುತ್ತೆವೆ. ಅವರ ಬೇಡಿಕೆಗಳನ್ನು ಕಾರ್ಯರೂಪಕ್ಕೆ ತರುವುದೇ ನಮ್ಮ ಮೂಲ ಉದ್ದೇಶವಾಗಿದೆ ಎಂದರು.
ನಮ್ಮ ಪಕ್ಷ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ತಿಳಿಸಲಾಗುತ್ತದೆ. ಅಭ್ಯರ್ಥಿಯನ್ನು ಜನರಿಗೆ ಬಿಡಲಾಗಿದೆ. ಒಂದು ಬದಲಾವಣೆಗಾಗಿ ನಮ್ಮ ಚಿಹ್ನೆ ಆಟೋಗೆ ಮತ ನೀಡಿ ಗೆಲ್ಲಿಸಿ ಅಧಿಕಾರಕ್ಕಾಗಿ ನಾವು ಯಾವ ಪಕ್ಷದ ಜೊತೆ ಸೇರಲ್ಲ ಎಂದರು.