12 ಲಕ್ಷ ಬಿಲ್ ಪಾವತಿಸದೆ ಎಸ್ಕೇಪ್

12 ಲಕ್ಷ ಬಿಲ್ ಪಾವತಿಸದೆ ಎಸ್ಕೇಪ್

ಹೈದರಾಬಾದ್, ಆ. 11 : ಆಂಧ್ರಪ್ರದೇಶ ರಾಜಧಾನಿ ಬಂಜಾರ ಹಿಲ್ಸ್ನಲ್ಲಿರುವ ಐಷಾರಾಮಿ ತಾಜ್ ಬಂಜಾರ ಹೋಟೆಲ್ನಲ್ಲಿ 102 ದಿನ ತಂಗಿದ್ದ ವಿಶಾಖಪಟ್ಟಣಂ ಮೂಲದ ವ್ಯಕ್ತಿಯೊಬ್ಬ 12 ಲಕ್ಷ ರೂ. ಗಿಂತ ಅಧಿಕ ಮೊತ್ತದ ಬಿಲ್ ಪಾವತಿಸದೆ ಪರಾರಿಯಾಗಿರುವ ಘಟನೆ ನಡೆದಿದೆ.
ಉದ್ಯಮಿ ಶಂಕರ್ ನಾರಾಯಣ್ 102 ದಿನ ತಂಗಿದ್ದರು. ಒಟ್ಟು ಬಿಲ್ 25.96 ಲಕ್ಷ ರೂ. ಆಗಿತ್ತು. 13.62 ಲಕ್ಷ ರೂ.ಗಳನ್ನು ಮಾತ್ರ ಪಾವತಿ ಇನ್ನೂ ಬಾಕಿ ಮೊತ್ತ 12.34 ಲಕ್ಷ ರೂ. ಪಾವತಿಸದೆಯೇ ಹೋಟೆಲ್ನ ರೂಮ್ ಖಾಲಿ ಮಾಡಿಕೊಂಡು ಹೋಗಿದ್ದಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಹೋಟೆಲ್ ಆಡಳಿತ ಮಂಡಳಿ ಆರೋಪಿಸಿದೆ.

ನೋಂದಣಿ ಪುಸ್ತಕದಲ್ಲಿದ್ದ ಶಂಕರ್ ಅವರ ಮೊಬೈಲ್ಗೆ ಹೋಟೆಲ್ ಸಿಬ್ಬಂದಿ ಕರೆ ಮಾಡಿ ಬಾಕಿ ಮೊತ್ತವನ್ನು ಕೇಳಿದ್ದಾರೆ. ಅದಕ್ಕೆ ಶಂಕರ್ ಶೀಘ್ರ ಪಾವತಿಸುತ್ತೇನೆ ಎಂದು ಕರೆ ಕಟ್ ಮಾಡಿದ್ದಾರೆ. ನಂತರ ಅವರು ಫೋನ್ಅನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos