ಬೆಂಗಳೂರು ,ಮೇ.23, ನ್ಯೂಸ್ ಎಕ್ಸ್ ಪ್ರೆಸ್ : ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಸುದ್ದಿಯಾಗಿದ್ದ ಮಂಡ್ಯ ಲೋಕಸಭಾ ಚುನಾವಣೆ ಕೊನೆಗೂ ಸುಮಲತಾ ಅಂಬರೀಷ್ ಅವರು ಗೆದ್ದು ಬೀಗಿದ್ದಾರೆ. ನಿಖಿಲ್ ಸೋಲಿನ ಮೂಲಕ ಸಿಎಂ ಕುಮಾರಸ್ವಾಮಿ ಅವರಿಗೆ ತೀವ್ರ ಮುಖಭಾಗವಾಗಿದೆ. ಒಮ್ಮೆ ನಿಖಿಲ್ ಕುಮಾರಸ್ವಾಮಿ ಮುನ್ನಡೆ ಸಾಧಿಸಿದ್ದರೆ, ಮತ್ತೊಮ್ಮೆ ಸುಮಲತಾ ಮುನ್ನಡೆ ಸಾಧಿಸಿ ಮತ ಎಣಿಕೆಯಲ್ಲಿ ಹಾವು-ಏಣಿಯಂತೆ ಕಂಡುಬಂದವು. 50 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದಾರೆ. ಸುಮಲತಾ ಅವರನ್ನು ಸೋಲಿಸಬೇಕೆಂದು. ಸುಮಲತಾ ಎಂಬ ಹೆಸರಿನಲ್ಲಿ ಇತರ ಮೂವರನ್ನು ಕಣಕ್ಕಿಳಿಸಿ ಜೆಡಿಎಸ್ ಪ್ರಯತ್ನ ಮಾಡಿತ್ತು.
ಜೋಡೆತ್ತುಗಳ ಶ್ರಮ :
ಮಂಡ್ಯ ಲೋಕಸಭಾ ಜಿದ್ದಾಜಿದ್ದಿನಲ್ಲಿ ಸುಮಲತಾ ಅವರನ್ನು ಗೆಲ್ಲಿಸಲೇಬೇಕೆಂದು ಸ್ಯಾಂಡ ವುಡ್ ಸ್ಟಾರ್ ನಟ ಯಶ್, ದರ್ಶನ್ ಹಗಲಿರುಳು ಪ್ರಚಾರಕ್ಕೆ ಕೊನೆಗೂ ಫಲ ಸಿಕ್ಕಂತಾಗಿದೆ. ಪ್ರಚಾರದ ವೇಳೆ ಕೆಲವರ ಟೀಕೆ ಟಿಪ್ಪಣಿಗಳಿಗೂ ಗುರಿಯಾಗಿದ್ದರೂ ಸಹ ಯಾರನ್ನೂ ಲೆಕ್ಕಿಸದೆ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡು ಸುಮಲತಾ ಅವರ ಪರ ಮತಯಾಚನೆ ಮಾಡಿದ್ದರು. ಇಬ್ಬರೂ ನಟರು ಜೋಡೆತ್ತುಗಳನೆ ಸುಮಲತಾ ಗೆಲುವಿಗೆ ಶ್ರಮಿಸಿದ್ದರು