ವಿದ್ಯುತ್ ತಗುಲಿ ಬಾಲಕ ಸಾವು

ವಿದ್ಯುತ್ ತಗುಲಿ ಬಾಲಕ ಸಾವು

ಬೆಂಗಳೂರು: ಬಾಣಸವಾಡಿಯ ರಾಜಕುಮಾರ್ ಪಾರ್ಕ್ ನಲ್ಲಿ ವಿದ್ಯುತ್
ತಗುಲಿ 7 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ.

ಬಿಬಿಎಂಪಿ ಪಾರ್ಕ್ ನಲ್ಲಿ ಬೆಸ್ಕಾನಿಂದ ವಿದ್ಯುತ್ ಕಾಮಗಾರಿ ನಡೆಸಲಾಗಿದೆ. ಎಲೆಕ್ಟ್ರಿಕ್ ವೈರ್ ಗಳನ್ನು ಜೋಡಿಸದೇ ಹಾಗೆಯೇ ಬಿಡಲಾಗಿದೆ. ಸಂಜೆ ಮಕ್ಕಳೊಂದಿಗೆ ಆಟವಾಡಲು ಪಾರ್ಕ್ ಗೆ ಹೋಗಿದ್ದ ಉದಯ್ ಕುಮಾರ್ ಆಕಸ್ಮಿಕವಾಗಿ ವೈರ್ ಮುಟ್ಟಿದ್ದು, ವಿದ್ಯುತ್ ತಗುಲಿ ಅಸ್ವಸ್ಥನಾಗಿದ್ದಾನೆ. ಪೋಷಕರು ಕೂಡಲೇ ಆಸ್ಪತ್ರೆಗೆ ಸೇರಿಸಿದರೂ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.

ವಿದ್ಯುತ್ ವೈರ್ ಗಳನ್ನು ಜೋಡಿಸದೇ ಬೇಜವಾಬ್ದಾರಿಯಿಂದ ಹಾಗೆಯೇ ಬಿಟ್ಟಿರುವುದೇ ದುರಂತಕ್ಕೆ ಕಾರಣವೆನ್ನಲಾಗಿದೆ.  ಘಟನೆಗೆ ಕಾರಣರಾದ ಬೇಜವಾಬ್ದಾರಿ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos