ಉತ್ತರ ಪ್ರದೇಶದಲ್ಲಿ ಸಿಡಿಲ ಬಡಿತಕ್ಕೆ 32 ಬಲಿ

ಉತ್ತರ ಪ್ರದೇಶದಲ್ಲಿ ಸಿಡಿಲ ಬಡಿತಕ್ಕೆ 32 ಬಲಿ

ಲಖನೌ , ಜು. 22 : ಉತ್ತರ ಪ್ರದೇಶದ ಹಲವಡೆ ಭಾನುವಾರ ಸಂಭವಿಸಿದ ಸಿಡಿಲ ಬಡಿತಕ್ಕೆ 32 ಮಂದಿ ದಾರುಣವಾಗಿ ಸಾವಿಗೀಡಾಗಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್ ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದು, ಪರಿಹಾರ ಘೋಷಿಸಿದ್ದಾರೆ. ಭಾರಿ ಮಳೆಯಿಂದಾಗಿ ಜುಲೈ 18 ಮತ್ತು 20 ಇಬ್ಬರು ವಿಷಕಾರಿ ಹಾವು ಕಡಿತಕ್ಕೆ ಒಳಗಾಗಿ ಅಸುನೀಗಿದ್ದಾರೆ. ಅಲ್ಲದೆ, 13 ಮಂದಿ ಸಿಡಿಲ ಬಡಿತದಿಂದ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾನುವಾರ ಸಿಡಿಲಿಗೆ ಕಾನ್ಪುರ ಹಾಗೂ ಫತೇಹ್ಪುರ್ ಜಿಲ್ಲೆಯಿಂದ ತಲಾ ಏಳು ಮಂದಿ ಮೃತಪಟ್ಟಿದ್ದಾರೆ. ಝಾನ್ಸಿಯಿಂದ 5, ಜುಲೌನ್ನಿಂದ 4, ಹಮೀರ್ಪುರ 3, ಘಾಜಿಪುರ್ 2 ಹಾಗೂ ಜೌನ್ಪುರ್, ಪ್ರತಾಪ್ಗಢ, ಕಾನ್ಪುರ್ ದೆಹಾತ್ ಮತ್ತು ಚಿತ್ರಕೂಟ್ ಜಿಲ್ಲೆಗಳಲ್ಲಿ ತಲಾ ಒಬ್ಬೊಬ್ಬರು ಮರಣ ಹೊಂದಿದ್ದಾರೆ.
ಪ್ರಾರಂಭದಲ್ಲಿ ಮೃತಪಟ್ಟ ಮೂವರಲ್ಲಿ ಒಬ್ಬರು ಡಿಯೋರಿಯಾ ಪ್ರದೇಶದಲ್ಲಿ ಸಿಡಿಲ ಬಡಿತಕ್ಕೆ ಸಾವಿಗೀಡಾದರೆ, ಕುಶಿನಗರದಲ್ಲಿ ಶನಿವಾರ ಮತ್ತೋರ್ವ ಹಾವು ಕಡಿತಕ್ಕೆ ಒಳಗಾಗಿ ಪ್ರಾಣ ಕಳೆದುಕೊಂಡಿದ್ದಾನೆ. ಇನ್ನೋರ್ವ ಕೂಡ ಅಂಬೇಡ್ಕರ್ನಗರದಲ್ಲಿ ಜುಲೈ 18ರಂದು ಹಾವು ಕಡಿತದಿಂದ ಸಾವಿಗೀಡಾಗಿದ್ದಾನೆ.

ಫ್ರೆಶ್ ನ್ಯೂಸ್

Latest Posts

Featured Videos