ಮುಧೋಳ, ನ. 4 : ನೆರೆ ಸಂತ್ರಸ್ತರ ಆಕ್ರೋಶ ಹೆಚ್ಚಾಗಿದೆ. ಸಂತ್ರಸ್ತರ ನೆರವಿಗೆ ಬಾರದ ಗೋಳು ಕೇಳದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ವಿರುದ್ಧ ಸಂತ್ರಸ್ತರು ತಮ್ಮ ಆಕ್ರೋಶ ತೀವ್ರಗೊಳಿಸಿದ್ದಾರೆ. ಪ್ರವಾಹ ಸಂಭವಿಸಿ ನಾವು ಬೀದಿಗೆ ಬಿದ್ದಿದ್ದೇವೆ.
ನಮ್ಮನ್ನು ಯಾರೂ ಹೇಳುವವರು, ಕೇಳುವವರು ಇಲ್ಲದಂತಾಗಿದೆ. ನಮಗೆ ಗತಿ ಯಾರು? ನಮ್ಮ ಕ್ಷೇತ್ರದವರು ಉಪಮುಖ್ಯಮಂತ್ರಿಯಾಗಿದ್ದಾರೆ. ನಮಗೆ ಪರಿಹಾರ ಕೊಡಲು ವಿಳಂಬವಾಗುತ್ತಿದೆ ಎಂದು ಸಂತ್ರಸ್ತರು ಆರೋಪ ಮಾಡುತ್ತಿದ್ದಾರೆ. ಮತ್ತೆ ಪ್ರವಾಹ ಸಂಭವಿಸಿ ನಮಗೆ ಅಪಾರ ನಷ್ಟ ಉಂಟಾದರೂ ಅಧಿಕಾರಿಗಳು ನಮ್ಮ ನೋವಿಗೆ ಸ್ಪಂದಿಸುತ್ತಿಲ್ಲ ಎಂದು ಹಲವರು ತಮ್ಮ ಸಂಕಟ ವ್ಯಕ್ತಪಡಿಸಿದ್ದಾರೆ.
ಈಗಲಾದರೂ ಸಚಿವರು ನಮ್ಮ ನೆರವಿಗೆ ಧಾವಿಸಬೇಕು. ನಮಗೆ ಪರಿಹಾರ ಕೊಡಿಸಬೇಕು ಎಂದು ಒತ್ತಾಯಿಸಿದ್ದಾರೆ.