ದಾವಣಗೆರೆ: ಎಲ್ಲೋ ಎಲ್ಲೋ ಒಂದು ಕಡೆ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಹತಾಶೆ ಭಾವನೆಯಲ್ಲಿದೆ. ಶಾಸಕ ಪ್ರತಾಪ್ ಸಿಂಹ ಅವರ ತಮ್ಮನ ವಿಚಾರದಲ್ಲಿ ಎಲ್ಲೋ ಒಂದು ಕಡೆ ರಾಜಕೀಯ ಪ್ರೇರಿತವಾಗಿರುವಂಥದ್ದು ಅನ್ನೋದನ್ನ ಅನಕ್ಷರಸ್ಥರು ಕೂಡ ಹೇಳುತ್ತಾರೆ. ಚುನಾವಣೆ ಮುಂದೆ ಬರುತ್ತಾ ಇದೆ ಲೋಕಸಭಾ ಚುನಾವಣೆ ಕಾಂಗ್ರೆಸ್ ಪಕ್ಷ ಆಡಳಿತ ಪಕ್ಷ ಕ್ಕೆ ಹಿನ್ನಡೆಯಾಗುತ್ತಿದೆ. ಮೊನ್ನೆ ಐದು ರಾಜ್ಯಗಳ ಚುನಾವಣೆ ಫಲಿತಾಂಶವನ್ನು ಕೂಡ ತಾವು ನೋಡಿದ್ದೀರಿ. ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರ ಹತಾಶೆಯಿಂದ ಈ ರೀತಿ ನಡೆದುಕೊಳ್ಳುತ್ತಿದೆ. ಪ್ರತಾಪ್ ಸಿಂಹ ಆಗಲಿ ಅವರ ಸಹೋದರ ಆಗಲಿ ಯಾವುದಕ್ಕೂ ಕೂಡ ಇದಕ್ಕೆ ಎದುರು ಕೊಳ್ಳುವಂತಹ ಪ್ರಶ್ನೆ ಅಲ್ಲ ಎಲ್ಲವನ್ನೂ ಕೂಡ ಎದುರಿಸುತ್ತೇವೆ ಎಂದು ವಿಜಯೇಂದ್ರ ಹೇಳಿದ್ದಾರೆ.