ಬೆಂಗಳೂರು: ಲೋಕಸಭಾ
ಚುನಾವಣೆ ಹಿನ್ನಲೆಯಲ್ಲಿ ಚುನಾವಣಾ
ಆಯೋಗ 2 ದಿನದ
ವಿಶೇಷ ಶಿಬಿರಗಳನ್ನು ಆಯೋಜನೆ
ಮಾಡಿದೆ. ಫೆ.23
ಮತ್ತು 24ರಂದು
ರಾಜ್ಯದ 58 ಸಾವಿರ
ಮತಗಟ್ಟೆಯಲ್ಲಿ ಶಿಬಿರ
ನಡೆಯಲಿದೆ.
ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರು ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದರು. ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ಹೆಸರು ಮತ್ತು ವಿಳಾಸ ತಿದ್ದುಪಡಿ, ವಿಳಾಸ ಬದಲಾವಣೆಗಾಗಿ ಅರ್ಜಿಗಳನ್ನು ಸಲ್ಲಿಸಲು ಶಿಬಿರ ಆಯೋಜನೆ ಮಾಡಲಾಗಿದೆ.
ರಾಜ್ಯದಲ್ಲಿ 58 ಸಾವಿರ ಮತದಾನ ಕೇಂದ್ರಗಳಿದ್ದು, ಎಲ್ಲಾ ರಾಜಕೀಯ ಪಕ್ಷಗಳಿಂದ ಆಯಾ ಬೂತ್ ಮಟ್ಟದ ಏಜೆಂಟರನ್ನು ಶಿಬಿರದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಲಾಗಿದೆ. ಜನರು ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಆಯೋಗ ಮನವಿ ಮಾಡಿದೆ.
ಮತದಾರರು ಯಾವುದೇ ದೂರುಗಳನ್ನು ಸಲ್ಲಿಸಲು ರಾಜ್ಯ ಮಟ್ಟದ ಸಹಾಯವಾಣಿಯನ್ನು ಆರಂಭಿಸಲಾಗಿದೆ. 1800-4255-1950 ಅಥವ ಆಯಾ ಜಿಲ್ಲಾ ಕೇಂದ್ರದ ಸಹಾಯವಾಣಿ ಸಂಖ್ಯೆ, ಜಿಲ್ಲೆಯ ಎಸ್ಟಿಡಿ ಕೋಡ್ ಸಂಖ್ಯೆ ಸೇರಿಸಿ 1950ಗೆ ಕರೆ ಮಾಡಬಹುದಾಗಿದೆ.