ಚಿಂಚೋಳಿ : ಲಸಿಕೆ ಅಭಿಯಾನ ಹಿನ್ನೆಲೆ, ಚಿಂಚೋಳಿ ತಾಲ್ಲೂಕಿನ ಐನಾಪೂರ ಗ್ರಾಮದ ಜನರು ಯಾವುದೇ ರೀತಿಯ ಭಯಪಡದೆ ಲಸಿಕೆ ತೆಗೆದುಕೊಳ್ಳಿ ಎಂದು ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ಪ್ರೇಮಸಿಂಗ ಜಾಧವ ತಿಳಿಸಿದರು.
ಬುಧವಾರ ಅಭಿಯಾನ ಉದ್ಘಾಟಿಸಿ ಮಾತನಾಡಿ, ತಾಲ್ಲೂಕಿನ ಇಬ್ಬರು ಪತ್ರಕರ್ತರಾದ ಮಹೇಬೂಬ ಷಾ ಮತ್ತು ರಾಜೇಂದ್ರ ಪ್ರಸಾದ್ ಅವರಿಗೆ ಲಸಿಕೆ ನೀಡಿ ಗ್ರಾಮದ ಜನರಿಗೆ ಲಸಿಕೆ ಜಾಗೃತಿ ಮೂಡಿಸಲಾಗಿದೆ ಎಂದರು.
ಈ ವೇಳೆ ವಿ.ಎಸ್.ಎಸ್.ಎನ್ ಅಧ್ಯಕ್ಷ ರೇವಪ್ಪ ಉಪ್ಪಿನ್, ಎಪಿಎಂಸಿ ಅಧ್ಯಕ್ಷ ಅಶೋಕ ಪಡಶೆಟ್ಟಿ, ಮಾಜಿ ಅಧ್ಯಕ್ಷ ರಮೇಶ್ ಪಡ ಶೆಟ್ಟಿ, ಉಪತಹಸಿಲ್ದಾರ್ ರಮೇಶ್, ಶಿಕ್ಷಕರು ಗೋಪಾಲ್, ಆರೋಗ್ಯ ಸಿಬ್ಬಂದಿಗಳು ಆಶಾ ಕಾರ್ಯಕರ್ತರು ಹಾಜರಿದ್ದರು.