ರೈತ ಆತ್ಮಹತ್ಯೆ: ಜಿಲ್ಲಾಸ್ಪತ್ರೆ ಮುಂದೆ ಧರಣಿ

  • In State
  • January 11, 2021
  • 216 Views
ರೈತ ಆತ್ಮಹತ್ಯೆ: ಜಿಲ್ಲಾಸ್ಪತ್ರೆ ಮುಂದೆ ಧರಣಿ

ಚಾಮರಾಜನಗರ: ಸಾಲಭಾದೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ರೈತ ಪುಟ್ಟಣ್ಣರವರ ಕುಟುಂಬಕ್ಕೆ ನೆರವು ನೀಡುವಂತೆ ಆಗ್ರಹಿಸಿ, ರೈತ ಮುಖಂಡರು ಮೃತ ಕುಟುಂಬಸ್ಥರೊಂದಿಗೆ ಜಿಲ್ಲಾಸ್ಪತ್ರೆಯ ಮುಂಭಾಗ ಧರಣಿ ನಡೆಸಿತು.
ಚಾಮರಾಜನಗರ ತಾಲೂಕಿನ ಜ್ಯೋತಿಗೌಡನಪುರ ಗ್ರಾಮದ ಪುಟ್ಟಣ್ಣ ಎಂಬ ರೈತ ಕೃಷಿಗಾಗಿ ಮಾಡಿದ ಸಾಲವನ್ನು ತೀರಿಸಲಾಗದೆ, ಕ್ರಿಮಿನಾಶಕವನ್ನು ಕುಡಿದು ತನ್ನ ಜಮೀನಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತನ ಕುಟುಂಬ ಅತಂತ್ರವಾಗಿದೆ. ಸರ್ಕಾರವು ಮೃತ ಕುಟುಂಬಕ್ಕೆ ನೆರವು ಘೋಷಣೆ ಮಾಡಬೇಕು ಮತ್ತು ಆತನ ಸಾಲವನ್ನು ಮನ್ನಾ ಮಾಡಬೇಕೆಂದು ಆಗ್ರಹಿಸಿದ ರೈತ ಮುಖಂಡರು ಕೃಷಿ ಇಲಾಖೆಯ ಅಧಿಕಾರಿಗಳು ಆಗಮಿಸದೇ ಇರುವ ಕ್ರಮವನ್ನು ಖಂಡಿಸಿದರು.
ಅಧಿಕಾರಿಗಳು ಕೂಡಲೇ ಆಸ್ಪತ್ರೆಗೆ ಬಂದು ಮೃತ ಕುಟುಂಬಕ್ಕೆ ಪರಿಹಾರ ಘೋಷಣೆ ಮಾಡಬೇಕೆಂದು ಆಗ್ರಹಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos