ಬಳ್ಳಾರಿ: 2018 ನೇ ಸಾಲಿನ ಸಿಂಚನ ಕಾವ್ಯ ರಾಜ್ಯ ಪುರಸ್ಕಾರವನ್ನು ಸಾಹಿತಿ ಹಾಗೂ
ಹೋರಾಟಗಾರ್ತಿ ಯಮುನಾ ಗಾಂವ್ಕರ್ ರಚಿಸಿದ ಅಬ್ಬೆ
ಮಡಿಲು ಕೃತಿಗೆ ನೀಡಲಾಯಿತು.
ಪುರಸ್ಕಾರದ ಜೊತೆಗೆ 5000 ರೂ.ನಗದು ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಶ್ರಮಜೀವಿಗಳಿಗೆ ಗೌರವ ಸನ್ಮಾನ ಸಮಾರಂಭ ಮಲ್ಲಿಗೆ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ಸಾಹಿತಿ ಬಿ. ಪೀರ್ ಬಾಷಾ ಚಾಲನೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತೋ.ಮ.ಶಂಕರ್ ಬೆಟಗೇರಿ ವಹಿಸಿದ್ದರು.