ಬೆಂಗಳೂರು, ಜ. 25: ಕಿರುತೆರೆಯಲ್ಲಿ ಹೆಸರು ಮಾಡಿ, ಬಿಗ್ಬಾಸ್ ಮನೆಗೆ ಕಾಲಿಟ್ಟ ನಟಿ, ನಿರೂಪಕಿ ಅನುಪಮಾ ಗೌಡ ಹಿರಿತೆರೆಗೂ ಕಾಲಿಟ್ಟು ಸೈ ಎನಿಸಿಕೊಂಡಿದ್ದಾರೆ. ಸದ್ಯ ಉತ್ತಮ ಅವಕಾಶಗಳನ್ನ ಪಡೆದು ಬೆಳೆಯುತ್ತಿರೋ ನಟಿ ಅನುಪಮಾ ಗೌಡ. ನಿಜಜೀವನದಲ್ಲಿ ಕಷ್ಟದಲ್ಲಿ ಎದ್ದುಬಂದ ಅನುಪಮಾ ಮುಂದೆ ತೆರೆಮೇಲೂ ಬೆಂಕಿಯಲ್ಲಿ ಅರಳೋ ಹೂವಾಗಲಿದ್ದಾರೆ.
ದೇವಿಶ್ರೀ ಪ್ರಸಾದ್ ನಿರ್ದೇಶನದಲ್ಲಿ ‘ಬೆಂಕಿಯಲ್ಲಿ ಅರಳಿದ ಹೂವು’ ಅನ್ನೋ ಸಿನಿಮಾ ಬರ್ತಿದ್ದು, ನೊಂದ ಹೆಣ್ಣಿನ ಪಾತ್ರದಲ್ಲಿ ಅನುಪಮಾ ಗೌಡ ಪ್ರಧಾನ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಸೋಮಾರಿ ಗಂಡನ ಜತೆ ಹೆಣಗಾಡುವ ಪಾತ್ರಕ್ಕೆ ಜೀವ ತುಂಬಿದ್ದಾರೆ.