ಕೆ.ಆರ್.ಪುರ, ನ. 29: ಕ್ಷೇತ್ರದ ಅಭಿವೃದ್ಧಿಯಲ್ಲಿ ಬೈರತಿ ಬಸವರಾಜ್ ಹೆಚ್ಚಿನ ಕಾಳಜಿ ವಹಿಸಲಿದ್ದು, ಅವರನ್ನು ಹೆಚ್ಚಿನ ಮತದಿಂದ ಗೆಲ್ಲಿಸಲಾಗುವುದೆಂದು ಅಂಬೇಡ್ಕರ್ ನಗರ ಮುಖಂಡ ಇಟಾಚಿ ಮಂಜು ತಿಳಿಸಿದರು.
ಅಂಬೇಡ್ಕರ್ ನಗರದಲ್ಲಿ ಮನೆ ಮನೆ ಪ್ರಚಾರ ಮಾಡಿ ಅವರು ಮಾತನಾಡಿದರು. ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಬೈರತಿ ಬಸವರಾಜ್ ಕ್ಷೇತ್ರದ ಅಭಿವೃದ್ಧಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು ಎಂದರು.
ಮೈತ್ರಿ ಸರ್ಕಾರದಲ್ಲಿ ಕ್ಷೇತ್ರಕ್ಕೆ ಅನುದಾನ ನೀಡದ ಕಾರಣ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಅಭಿವೃದ್ಧಿ ಹರಿಕಾರರು ಎಂದರು. ಇವರನ್ನು ಗೆಲ್ಲಸಿಕೊಂಡು ಕೆ.ಆರ್.ಪುರ ವಿಧಾನಸಭಾ ಮಾದರಿ ಕ್ಷೇತ್ರ ಮಾಡಲು ಸಹಕರಿಸೋಣ ಎಂದರು.
ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ತಮ್ಮ ಭಾಗಗಳಲ್ಲಿ ಪ್ರಕಾರ ನಡೆಸಿ ಜನರಿಗೆ ಮನವರಿಕೆ ಮಾಡಿದರೆ ಬೈರತಿ ಬಸವರಾಜ್ ಗೆದ್ದು ಮಂತ್ರಿಯಾಗಳಾಲಿದ್ದಾರೆ ಎಂದು ಅವರು ತಿಳಿಸಿದರು.