ರಾಮನಗರ, ಅ. 14 : ಮಾಜಿ ಡಿಸಿಎಂ ಪರಮೇಶ್ವರ್ ಪಿಎ ರಮೇಶ್ ಸಾವಿನ ಸುತ್ತಲೂ ಅನುಮಾನಗಳ ಹುತ್ತ ಬೆಳೆಯುತ್ತಿದೆ. ರಮೇಶ್ ಪತ್ನಿ ಸೌಮ್ಯ ಕೂಡ ಐಟಿ ಅಧಿಕಾರಿಗಳಿಂದ ಮನನೊಂದು ರಮೇಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಿದ್ದಾರೆ.
ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸೌಮ್ಯ, ಐಟಿ ಅಧಿಕಾರಿಗಳಿಂದ ಮನನೊಂದು, ಮಾನ ಮರ್ಯಾದೆ ಹೋಗುತ್ತದೆ ಎಂದು ಹೆದರಿ ರಮೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಮ್ಮ ಮನೆಗೆ ಐಟಿ ಅಧಿಕಾರಿಗಳು ಮಧ್ಯಾಹ್ನ 1 ಗಂಟೆಗೆ ಬಂದು ಸಂಜೆ 6 ಗಂಟೆಯವರೆಗೂ ಇದ್ದರು. ಐಟಿ ಅಧಿಕಾರಿಗಳು ಅವರ ಜತೆಯಲ್ಲೇ ರಮೇಶ್ರನ್ನು ಕರೆದುಕೊಂಡು ಹೋದರು. ಮನೆಯಲ್ಲಿ ವಿಚಾರಣೆ ಮಾಡಿ ಏನು ಸಿಗುತ್ತೆ ಎಂದು ಹುಡುಕಿದರು. ಆದರೆ ಏನು ಸಿಗಲಿಲ್ಲ ಎಂದರು.