ರಾಮನಗರ, ಸೆ. 24 : ಕುಂಬಳಗೂಡು, ಅಂಚೇಪಾಳ್ಯದ ಬಳಿ ವೃಷಭಾವತಿ ಹಳದಿ ಬಣ್ಣಕ್ಕೆ ತಿರುಗಿದೆ. ಅಕ್ಕಪಕ್ಕದ ಕಾರ್ಖಾನೆಗಳಿಂದ ತ್ಯಾಜ್ಯ ನೀರು ನದಿ ಒಡಲು ಸೇರುತ್ತಿದೆ. ಬೆಂಗಳೂರು ಸೇರಿ ಸುತ್ತಮುತ್ತಲ ಪ್ರದೇಶದಲ್ಲಿ ಉತ್ತಮ ಮಳೆಯಾಗಿದ್ದರಿಂದ ನದಿಯಲ್ಲಿ ನೀರಿನ ಹರಿವೂ ಹೆಚ್ಚಿದ್ದು, ಇದರ ಲಾಭ ಪಡೆದುಕೊಂಡ ಕಾರ್ಖಾನೆಗಳು ಕಲುಷಿತ ನೀರನ್ನು ನದಿಗೆ ಬಿಟ್ಟಿವೆ. ಇದರ ಪರಿಣಾಮವಾಗಿ ಸದಾಕಾಲ ಕಪ್ಪು, ಕಂದು ಬಣ್ಣದಿಂದಲೇ ಹರಿಯುತ್ತಿದ್ದ ನದಿ ಹಳದಿಯಾಗಿದೆ.