ರಾಮನಗರ, ಸೆ.5 : ಮಾಜಿ ಸಚಿವ ಡಿ ಕೆ ಶಿವಕುಮಾರ್ ಬಂಧನ ಖಂಡಿಸಿ ಕನಕಪುರದಲ್ಲಿ ವಿನೂತನ ಪ್ರತಿಭಟನೆ ಆರಂಭವಾಗಿದ್ದು, ಪಟ್ಟಣದ ನಿವಾಸಿ ರಿಜ್ವಾನ್ ಎಂಬಾತ ಕೇಶ ಮುಂಡನ ಮಾಡಿಸಿಕೊಂಡು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ತಿಥಿ ನಡೆಸಿದ್ದೇನೆಂದು ಆಕ್ರೋಶ ವ್ಯಕ್ತಪಡಿಸಿದ್ದಾನೆ. ದೇಶ ದ್ರೋಹಿ ಅಮಿತ್ ಶಾ ಮೃತಪಟ್ಟಿದ್ದು, ದೇಶ ಪ್ರೇಮ ಪ್ರದರ್ಶಿಸುವ ಸಲುವಾಗಿ ಕೇಶ ಮುಂಡನ ಮಾಡಿಸಿಕೊಂಡಿದ್ದೇನೆ. ದೇಶಕ್ಕೆ ಒಳ್ಳೆಯದಾಗಲಿ ಎಂದು ಯುವಕ ಹೇಳಿಕೊಂಡಿದ್ದಾನೆ.