ಮಂಗಳೂರು, ಮೇ.15, ನ್ಯೂಸ್ ಎಕ್ಸ್ ಪ್ರೆಸ್: ಕರಾವಳಿ ಕೆಂದ್ರಬಿಂದು ಮಂಗಳೂರಿನಲ್ಲಿ ನೀರಿಗೆ ಹಾಹಾಕಾರ ಶುರುವಾಗಿದೆ. ಕುಡಿಯೋ ನೀರಿಗೂ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ವಿಪರೀತ ಸೆಕೆಯಿಂದ ಮಂಗಳೂರು ಜನರು ಹೈರಾಣಾಗಿದ್ದಾರೆ. ಮಳೆಗಾಗಿ ಮುಸ್ಲಿಂ ಬಾಂಧವರು ದೇವರ ಮೊರೆ ಹೋಗಿದ್ದಾರೆ.
ಮಳೆಗಾಗಿ ಮಂಗಳೂರಿನ ಮುಸ್ಲಿಂ ಬಾಂಧವರು ವಿಶೇಷ ನಮಾಝ್, ಕುತ್ಬಾ ಪಾರಾಯಣ ನಡೆಸಿದರು. ಕುದ್ರೋಳಿಯ ಸಲಾಫಿ ಮಸೀದಿಯ ಖತೀಬ್ ಮುಹಮ್ಮದ್ ಶೇಖ್ ಸಾಕಿಬ್ ಸಲೀಂ ಉಮ್ರಿ ಅವರ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯ್ತು. ವಿಶೇಷ ಪ್ರಾರ್ಥನೆ ವೇಳೆ ಶಾಸಕ ವೇದವ್ಯಾಸ ಕಾಮತ್ ಭಾಗವಹಿಸಿದ್ದರು. ಎಸ್.ಕೆ.ಎಸ್.ಎಂ ಕಾರ್ಯದರ್ಶಿ ಎಂ.ಜಿ. ಮುಹಮ್ಮದ್ ಹಾಗೂ ಇತರರು ಉಪಸ್ಥಿತರಿದ್ದರು.