ನವದೆಹಲಿ, ಏ. 11, ನ್ಯೂಸ್ ಎಕ್ಸ್ ಪ್ರೆಸ್: ಇಂದು ಮೊದಲ ಹಂತದ ಮತದಾನ ನಡೆಯಲಿದ್ದು, 18 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳ 91 ಲೋಕಸಭಾ ಕ್ಷೇತ್ರಗಳಲ್ಲಿ ಜನ ತಮ್ಮ ಹಕು ಚಲಾಯಿಸಲಿದ್ದಾರೆ. ಲೋಕಸಭೆಯ ಮತದಾನದ ಜತೆಗೆ, ಆಂಧ್ರಪ್ರದೇಶ (175 ಸ್ಥಾನ), ಸಿಕ್ಕಿಂ (32), ಒಡಿಶಾ (28), ಅರುಣಾಚಲ ಪ್ರದೇಶ (28) ವಿಧಾನಸಭೆಗಳಿಗೂ ಚುನಾವಣೆ ನಡೆಯಲಿದೆ.
ಖಂಡದಲ್ಲಿ 5, ಅರುಣಾಚಲ ಪ್ರದೇಶ, ಜಮ್ಮು- ಕಾಶ್ಮೀರ, ಮೇಘಾಲಯದಲ್ಲಿ ತಲಾ 2, , ಛತ್ತೀಸ್ ಗಢ, ನಾಗಾಲ್ಯಾಂಡ್, ಮಿಜೋರಂ, ಮಣಿಪುರ, ತ್ರಿಪುರಾ, ಅಂಡಮಾನ್-ನಿಕೋಬಾರ್ನಲ್ಲಿ ತಲಾ 1 ಕ್ಷೇತ್ರಗಳಿಗೆ ಗುರುವಾರ ಮತದಾನ ನಡೆಯಲಿದೆ. ಆಂಧ್ರಪ್ರದೇಶದ ಎಲ್ಲ 25 ಲೋಕಸಭಾ ಕ್ಷೇತ್ರ, ತೆಲಂಗಾಣದ 17 ಲೋಕಸಭಾ ಕ್ಷೇತ್ರ ಸಹಿತ ಉತ್ತರಾ
80 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶದಲ್ಲಿ 1 ಹಂತದ ಮತದಾನ ಕೇವಲ 8 ಕ್ಷೇತ್ರಗಳಲ್ಲಿ ನಡೆಯಲಿದೆ. ಇವುಗಳಲ್ಲಿ ಸಹರಣ್ಪುರ, ಕೈರಾನಾ, ಗಾಜಿಯಾಬಾದ್, ಬಾಗ್ಪತ್ ಮತ್ತು ಗೌತಮ್ ಬುದ್ಧ ನಗರ ಪ್ರಮುಖವಾದವು. ಈ ಕ್ಷೇತ್ರಗಳಲ್ಲಿ ಕಣಕ್ಕಿಳಿದಿರುವ ಮೂವರು ಕೇಂದ್ರ ಸಚಿವರಾದ ಜನರಲ್ ವಿ.ಕೆ. ಸಿಂಗ್ (ಗಾಜಿಯಾಬಾದ್), ಸತ್ಯಪಾಲ್ ಸಿಂಗ್ (ಬಾಗ್ಪತ್), ಮಹೇಶ್ ಶರ್ಮಾ (ಗೌತಮ ಬುದ್ಧ ನಗರ) ಮತ್ತು ಆರ್ಎಲ್ಡಿ ಮುಖ್ಯಸ್ಥ ಅಜಿತ್ ಸಿಂಗ್ ಮತ್ತು ಅವರ ಪುತ್ರ ಜಯಂತ್ ಚೌಧರಿಯವರ ರಾಜಕೀಯ ಭವಿಷ್ಯವೂ ನಿರ್ಧಾರವಾಗಲಿದೆ.