ಬೆಂಗಳೂರು, ಮಾ. 23, ನ್ಯೂಸ್ ಎಕ್ಸ್ ಪ್ರೆಸ್: ಬೆಂಗಳೂರಿನಲ್ಲಿರುವ ಕೆರೆಗಳಿಗೆ ಮರುಜೀವ ನೀಡಲು ಸಾಫ್ಟ್ವೇರ್ ಎಂಜಿನಿಯರ್ ಒಬ್ಬರು ಕೇವಲ 45 ದಿನಗಳಲ್ಲಿ ಮರುಜೀವ ನೀಡಲು ಪಣ ತೊಟ್ಟಿದ್ದಾರೆ.
ಬೆಂಗಳೂರಿನ ಕೆರೆಗಳಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದು ಇದು ಇನ್ನು ಇದೇ ರೀತಿ ಮುಂದುವರೆದರೆ 2025ರಷ್ಟೊತ್ತಿಗೆ ಬೆಂಗಳೂರಿನ ಎಲ್ಲಾ ಕೆರೆಗಳು ನಾಶವಾಗುತ್ತವೆ.
ಬರಿದಾಗುತ್ತಿರುವ ಕೆರೆಗಳಿಗೆ ಶೀಘ್ರವೇ ಮರುಜೀವ ದೊರೆಯಲಿದೆ.
ಟೆಕ್ಕಿ ಆನಂದ್ ಕೆರೆಗಳಿಗೆ ಮರುಜೀವ ನೀಡಲು ಸಿದ್ಧರಾಗಿ ನಿಂತಿದ್ದಾರೆ.ಕೆರೆಗಳು ಭೂಮಿಯ ಕಣ್ಣುಗಳಿದ್ದಂತೆ ಎಂದು ಹೇಳಿದ್ದು, 2025ರೊಳಗೆ 45 ಕೆರೆಗಳನ್ನು ಪುನರುಜ್ಜೀವಗೊಳಿಸಲು ನಿರ್ಧರಿಸಿದ್ದೇನೆ ಎಂದು ಅವರು ತಿಳಿಸಿದ್ದಾರೆ.