ಇನ್ನೂ ಮುಗಿಯದ ವರುಣನ ಆರ್ಭಟ

ಇನ್ನೂ ಮುಗಿಯದ ವರುಣನ ಆರ್ಭಟ

ಬೆಂಗಳೂರು, ಅ. 21: ಅರಬ್ಬೀ ಸಮುದ್ರದ ಪೂರ್ವ ಕೇಂದ್ರದಲ್ಲಿ ವಾಯುಭಾರ ಕುಸಿತವಾಗಿದ್ದು, ಮುಂದಿನ 5 ದಿನಗಳ ವರೆಗೆ ಮಳೆಯಾಗಲಿದೆ. 24 ಗಂಟೆಯಲ್ಲಿ ಮತ್ತಷ್ಟು ವಾಯುಭಾರ ಕುಸಿತ ಆಗುವ ಸಾಧ್ಯತೆ ಹೆಚ್ಚಾಗಿದ್ದು, ಮತ್ತೆ 12 ಗಂಟೆ ಕಳೆದ ಮೇಲೆ ವಾಯುಭಾರ ಕುಸಿತದ ತೀವ್ರತೆ ಸಹ ಹೆಚ್ಚಾಗಲಿದೆ.

ಬೆಳಗಾವಿ, ಹುಬ್ಬಳ್ಳಿ, ಧಾರವಾಡ ಭಾಗದಲ್ಲಿ ಹೆಚ್ಚು ಮಳೆಯಾಗಲಿದ್ದು, ಮಧ್ಯಾಹ್ನ, ರಾತ್ರಿ ವೇಳೆ ವರುಣನ ಅಬ್ಬರ ಹೆಚ್ಚಾಗಲಿದೆ. ಮತ್ತೆ ಬಂಗಾಳಕೊಲ್ಲಿಯಲ್ಲೂ ವಾಯುಭಾರ ಕುಸಿತ ಸಾಧ್ಯತೆ ಇದೆ. ಹೀಗಾಗಿ ಇದೇ ತಿಂಗಳ 23ರೊಳಗೆ ತಮಿಳುನಾಡು ಗಡಿಭಾಗ, ಆಂಧ್ರ ಭಾಗದಲ್ಲೂ ಮಳೆ ಹೆಚ್ಚಾಗಲಿದೆ. ಇತ್ತ ಬೆಂಗಳೂರು, ಬೆಂಗಳೂರು ಗ್ರಾಮಾಂತರ ಹಾಗೂ ದಕ್ಷಿಣ ಒಳನಾಡು ಪ್ರದೇಶದಲ್ಲೂ ಮಳೆಯಾಗಲಿದೆ

ಫ್ರೆಶ್ ನ್ಯೂಸ್

Latest Posts

Featured Videos