ಪ್ರತಾಪ್‌ ಸಿಂಹಗೆ ಟಾಂಗ್‌ ಕೊಟ್ಟ ಎಂ.ಲಕ್ಷ್ಮಣ್

ಪ್ರತಾಪ್‌ ಸಿಂಹಗೆ ಟಾಂಗ್‌ ಕೊಟ್ಟ ಎಂ.ಲಕ್ಷ್ಮಣ್

ಮೈಸೂರು: ಲೋಕಸಭಾ ಚುನಾವಣೆ ಹತ್ತಿರಕ್ಕೆ ಬರುತ್ತಿದೆ. ಕರ್ನಾಟಕದ ಹಾಲಿ ಬಿಜೆಪಿ ಸಂಸದರು ಟಿಕೆಟ್‌ ಸಿಗುವ ನಿರೀಕ್ಷೆಯಿಂದಾಗಿ ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ಮುಂದುವರೆಸುತ್ತಿದ್ದಾರೆ. ಆದರೆ, ಈ ಬಾರಿ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದಿಂದ ಹಾಲಿ ಸಂಸದರಾದ ಪ್ರತಾಪ್‌ ಸಿಂಹ ಅವರಿಗೆ ಟಿಕೆಟ್‌ ಕೈ ತಪ್ಪಿದೆ.

ಟಿಕೇಟ್ ಕೈತಪ್ಪಿದ ಕಾರಣ ಪ್ರತಾಪ್ ಸಿಂಹ ಗೆ ಬುದ್ದಿ ಭ್ರಮಾಣೆಯಾಗಿದೆ. ಅವರಿಗೆ ನಿಮಾನ್ಸ್ ನಲ್ಲಿ ಸೂಕ್ತ ಚಿಕಿತ್ಸೆ ಕೊಡಿಸಬೇಕಿದೆ. ಎಂ.‌ ಲಕ್ಷ್ಮಣ್ ನನ್ನು ಜೈಲಿಗೆ ಕಳಿಸ್ತಿನಿ ಎಂಬ ಪ್ರತಾಪ್ ಸಿಂಹ ಹೇಳಿಕೆಗೆ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್ ತಿರುಗೇಟು. ಮೈಸೂರಲ್ಲಿ ಇಂದು ಆಯೋಜಿಸಿದ್ದ ಪಕ್ಷದ ಸಮಾವೇಶದಲ್ಲಿ ಮಾತನಾಡಿದ ಎಂ. ಲಕ್ಷ್ಮಣ್‌, ಸಾರ್ವಜನಿಕವಾಗಿಯೇ ಪ್ರತಾಪ್‌ ಸಿಂಹಗೆ ಕೆಲ ಪ್ರಶ್ನೆಗಳನ್ನು ಕೇಳಿದ್ದಾರೆ. ಅದು ಹೀಗಿದೆ. ನಿಮಗೆ ಟಿಕೆಟ್ ಮಿಸ್ ಮಾಡಿದ್ದು ಯಾರು? ಯಾಕೆ ಅನ್ನೋ ಸತ್ಯ ಮೊದಲು ಹೇಳಿ. ನೀವು ನನ್ನ ಎದುರಾಳಿಯೆ ಅಲ್ಲ. ಯಾಕೆ ನನ್ನ ಬಗ್ಗೆ ಮಾತಾಡ್ತಿರಿ?

ನಾನು ಒಕ್ಕಲಿಗ ಅಲ್ಲ ಅನ್ನೋದಕ್ಕೆ ಫ್ರೂಫ್ ಇದ್ದರೆ ಕೊಡಿ. ನಾವು ಹುಟ್ಟಿದ್ದಾಗ ಒಕ್ಕಲಿಗ. ಬೆಳೆಯುತ್ತಾ ವಿಶ್ವ ಮಾನವನಾಗಿದ್ದೇನೆ. ಹತಾಶರಾಗಿ ಪ್ರತಾಪ್ ಸಿಂಹ ಮಾತಾಡುತ್ತಿದ್ದಾರೆ. ಕೈ ಮುಗಿದು ಕೇಳ್ತಿನಿ. ಚುನಾವಣೆಗೆ ಮುನ್ನವೆ ನನ್ನ ಜೈಲಿಗೆ ಕಳಿಸೋ ಕೆಲಸ ಮಾಡಿ.

ನಿಮ್ಮ ಬಗ್ಗೆ ಏನೂ ಮಾತಾಡಬಾರದು ಎಂಬ ತಡೆಯಾಜ್ಞೆ ನನ್ನ ಮೇಲೆ ಯಾಕೆ ತಂದ್ರಿ? ತಡೆಯಾಜ್ಞೆ ತೆರವು ಮಾಡಿ ಬನ್ನಿ, ನಂದೇನೂ ಚರಿತ್ರೆ, ನಿನ್ನದೇನೂ ಚರಿತ್ರೆ ಅಂತಾ ಮುಕ್ತವಾಗಿ ಚರ್ಚೆ ಮಾಡೋಣಾ.

ನಾನು ಜೂಜಾಡಲ್ಲ, ಸಿಗರೇಟ್ ಸೇದಲ್ಲ, ರಾತ್ರಿ ವ್ಯವಹಾರ, ಹಗಲು ವ್ಯವಹಾರ ಮಾಡಲ್ಲ. ಮಡಿಕೇರಿಯಲ್ಲಿ ಎಸ್ಟೇಟ್ ಇಲ್ಲ,ರೆಸಾರ್ಟ್ ಮಾಡಿಲ್ಲ. ನ್ಯಾಯಾಲಯದಲ್ಲಿನ ತಡೆಯಾಜ್ಞೆ ತೆರವು ಮಾಡಿ, ನನ್ನದು ಕೊಳಕು ಜೀವನನಾ, ನಿಮ್ಮದು ಕೊಳಕು ಜೀವನಾನ ಎಂಬುದನ್ನು ಜನರ ಮುಂದೆ ಬಿಚ್ಚಿಡ್ತಿನಿ.

ಫ್ರೆಶ್ ನ್ಯೂಸ್

Latest Posts

Featured Videos