ಕಸ ವಿಲೇವಾರಿ ಇಲ್ಲ

ಕಸ ವಿಲೇವಾರಿ ಇಲ್ಲ

ವಿಜಯಪುರ,ಅ. 18 : ತಿರುವಿನಲ್ಲಿ ಸುತ್ತಲಿನ ಮನೆಯವರು ಕಸ ತಂದು ಎಸೆಯುವುದಲ್ಲದೆ, ಮನೆಗಳಲ್ಲಿ ಬಳಕೆಯಾಗದ ವಸ್ತುಗಳನ್ನು ತಂದು ಗುಡ್ಡೆ ಹಾಕುತ್ತಾರೆ. ಪಟ್ಟಣದ ಮಂಡಿಬೆಲೆ ರಸ್ತೆಯ ಸುಜ್ಞಾನ ನಗರ ಬಡಾವಣೆಯ 2ನೇ ಕ್ರಾಸ್ನ ಸುಬ್ಬಮ್ಮಚನ್ನಪ್ಪ ಸಮುದಾಯ ಭವನದ ಎದುರಿನ ರಸ್ತೆ ತಿರುವಿನಲ್ಲಿ ಯಾವಾಗಲೂ ಕಸ ತುಂಬಿರುವುದರಿಂದ ಅನೈರ್ಮಲ್ಯ ತಾಂಡವಾಡುತ್ತಿದೆ.
ಆಹಾರ ಪದಾರ್ಥಗಳನ್ನೂ ತಂದು ಎಸೆಯುವುದರಿಂದ ನಾಯಿಗಳು ರಸ್ತೆಯುದ್ದಕ್ಕೂ ಚೆಲ್ಲಾಪಿಲ್ಲಿಯಾಗಿ ಹರಡುತ್ತವೆ. ಇದರಿಂದ ನೈರ್ಮಲ್ಯ ಮತ್ತಷ್ಟು ಹದಗೆಡುವಂತಾಗಿದೆ. ತ್ಯಾಜ್ಯ ಸಂಗ್ರಹಿಸಲು ವಾಹನಗಳು ಬರುತ್ತಿಲ್ಲ. ಸುತ್ತಲಿನ ಮನೆಯವರು ಕಸ ತಂದು ಹಾಕುತ್ತಾರೆ. ಪಕ್ಕದಲ್ಲಿಯೇ ಚರಂಡಿ ತುಂಬಿಕೊಂಡಿದೆ. ಕಸವೂ ಚರಂಡಿಯೊಳಗೆ ಬಿದ್ದು ದುರ್ವಾಸನೆ ಬೀರುತ್ತಿದೆ. ಸೊಳ್ಳೆಗಳ ಸಂತತಿಯೂ ಹೆಚ್ಚಾಗುತ್ತಿದೆ. ಇದೆಲ್ಲದರ ಪರಿಣಾಮ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos