ವಿಜಯಪುರ, ಅ. 25 : ಜನರ ಸೇವೆಯೇ ಜನಾರ್ದನ ಸೇವೆ. ” ಗ್ರಾಮೀಣ ಪ್ರದೇಶದ ಜನರ ಕಷ್ಟ ಅರಿತು ಅವರ ನೋವಿಗೆ ಸ್ಪಂದಿಸುವುದೇ ನನ್ನ ಪರಮ ಗುರಿ. ಅದೇ ತೃಪ್ತಿದಾಯಕ ಕೆಲಸ” ಹೀಗೆಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಜನರ ನೆರೆವಿಗೆ ನಿಂತಿದ್ದಾರೆ.
ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅನಾರೋಗ್ಯದ ನಡುವೆಯೂ ಜನಸೇವೆ ಮಾಡಿದ್ದಾರೆ. ಮಂಗಳವಾರದಿಂದ ಯತ್ನಾಳ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹಾಗಾಗಿ ವೈದ್ಯರು ಯತ್ನಾಳ್ ಅವರಿಗೆ ಡ್ರಿಪ್ ಹಾಕಿ ವಿಶ್ರಾಂತಿ ಮಾಡುವಂತೆ ಸೂಚಿಸಿದ್ದಾರೆ.
ವೈದ್ಯರ ಮಾತನ್ನು ಲೆಕ್ಕಿಸದೇ ಯತ್ನಾಳ್ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ. ಯತ್ನಾಳ್ ಮೊದಲು ವಿಜಯಪುರ ನಗರದ ವಾರ್ಡ್ ಸಂಖ್ಯೆ 4ರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಬಳಿಕ ಪುರಾತನ ಬಾವಿ ಜೀರ್ಣೋದ್ಧಾರ ಹಾಗೂ ಗಂಗಾ ಪೂಜೆಯಲ್ಲಿ ಯತ್ನಾಳ್ ಭಾಗವಹಿಸುವ ಮೂಲಕ ಜನಸೇವೆಯಲ್ಲಿ ತೊಡಗಿಕೊಂಡರು.