ಸಿಎಂಗೆ ಉ. ಚುನಾವಣೆ ಸೋಲಿನ ಭೀತಿ

 ಸಿಎಂಗೆ ಉ. ಚುನಾವಣೆ ಸೋಲಿನ ಭೀತಿ

ಬೆಂಗಳೂರು , ಡಿ. 6: 15 ಕ್ಷೇತ್ರಗಳಲ್ಲಿ ಮತದಾನ ಪೂರ್ಣಗೊಂಡಿದೆ. ಅನರ್ಹರು ಗೆಲ್ಲಲಿ ಎಂದು ಕೋರಿ ಮುಖ್ಯಮಂತ್ರಿ ಯಡಿಯೂರಪ್ಪ ದೇವರ ಮೊರೆ ಹೋಗಿದ್ದಾರೆ. ಉಪಚುನಾವಣೆ ಕುರಿತಂತೆ ಪ್ರತಿಕ್ರಿಯೆ ನೀಡಲು ಸಿಎಂ ಹಿಂದೇಟು ಹಾಕುತ್ತಿದ್ದಾರೆ. ಅನರ್ಹರನ್ನು ಗೆಲ್ಲಿಸುವ ಸಂಪೂರ್ಣ ಜವಾಬ್ದಾರಿಯನ್ನು ಬಿಎಸ್ವೈ ಹೊತ್ತುಕೊಂಡಿದ್ದರು.

ಕಳೆದ 20 ದಿನಗಳಿಂದ ಬಿಎಸ್ವೈ ತಲೆಯಲ್ಲಿ ಓಡುತ್ತಿದ್ದ ಏಕೈಕ ವಿಚಾರ ಎಂದರೆ ಉಪಚುನಾವಣೆಯನ್ನು ಗೆಲ್ಲುವುದು ಮತ್ತು ಆ ಮೂಲಕ ತಮ್ಮ ಸರ್ಕಾರವನ್ನು ಉಳಿಸಿಕೊಳ್ಳುವುದು. ಇಷ್ಟೇ ಆಗಿತ್ತು. ಈಗ ಉಪಚುನಾವಣೆ ತೀರ್ಪು ಏನಾಗಲಿದೆ ಎಂದು ಪ್ರಶ್ನಿಸಿದರೆ ಆ ಬಗ್ಗೆ ಬಿಎಸ್ವೈ ಮೌನ ವಹಿಸುತ್ತಿದ್ದಾರೆ.

 

 

ಫ್ರೆಶ್ ನ್ಯೂಸ್

Latest Posts

Featured Videos