ವಿಜಯಪುರ, ಅ.29 : ಪ್ರತಿಯೊಬ್ಬರೂ ದೀಪಾವಳಿ ಸಂಭ್ರಮದಲ್ಲಿದ್ದಾಗ ಮತ್ತೆ ಭೀಮಾ ತೀರದಲ್ಲಿ ಗುಂಡಿನ ಮೊರೆತಗೊಂಡಿದೆ. ಭೀಮಾತೀರದ ಚಡಚಣ ಸಹೋದರರ ಹತ್ಯೆಯಲ್ಲಿ ಆರೋಪಿಯಾಗಿದ್ದ ಶಿವಾನಂದ ಎಂಬಾತನೇ ಗಾಳಿಯಲ್ಲಿ ಗುಂಡು ಹಾರಿಸಿ ಆತಂಕ ಸೃಷ್ಟಿಸಿದವ.
ದೀಪಾವಳಿ ಸಂದರ್ಭದಲ್ಲಿ ವಾಹನಗಳ ಪೂಜೆಯ ನಂತರ ಆರೋಪಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ.ಇದನ್ನು ಮೊಬೈಲ್ನಲ್ಲಿ ರಿಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಿಗೆ ಇದೀಗ ಅದು ವೈರಲ್ ಆಗಿದೆ.