ಮಾತ್ರೆ ಸೇವಿಸಿ ಯುವಕರು ಸಾವು

ಮಾತ್ರೆ ಸೇವಿಸಿ ಯುವಕರು ಸಾವು

ಬೆಂಗಳೂರು, ನ. 23 : ‘ಮಾದಕ ವಸ್ತು ಅಂಶವಿರುವ ಮಾತ್ರೆಗಳನ್ನು ಸೇವಿಸಿ ಯುವಕರಿಬ್ಬರು ಮೃತಪಟ್ಟಿದ್ದಾರೆ’ ಎನ್ನಲಾದ ಪ್ರಕರಣ ಸಂಬಂಧ ಪಶ್ಚಿಮ ಕಾರ್ಡ್ ರಸ್ತೆಯ ಮನ್ದೀಪ್ ಫಾರ್ಮ್ ಔಷಧಿ ಮಳಿಗೆ ಮಾಲೀಕ ಮನೀಶ್ ಕುಮಾರ್ (30) ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.
ವೈಯಾಲಿಕಾವಲ್ ಸಮೀಪದ ಕೋದಂಡರಾಮಪುರ ನಿವಾಸಿಗಳಾದ ಅಭಿಲಾಷ್ (23) ಮತ್ತು ಗೋಪಿ (30) ಎಂಬುವರು ಇತ್ತೀಚೆಗೆ ಮೃತಪಟ್ಟಿದ್ದರು. ತನಿಖೆ ಕೈಗೊಂಡಿದ್ದ ಪೊಲೀಸರು, ಮಾದಕ ವಸ್ತು ಅಂಶವಿರುವ ಮಾತ್ರೆಗಳನ್ನು ಸೇವಿಸಿದ್ದೇ ಅವರ ಸಾವಿಗೆ ಕಾರಣವಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದರು.<ಇದೀಗ ಯುವಕರಿಗೆ ಮಾತ್ರೆ ಮಾರಾಟ ಮಾಡಿದ್ದ ಔಷಧಿ ಮಳಿಗೆ ಮಾಲೀಕನನ್ನು ಪೊಲೀಸರು ಸೆರೆ ಹಿಡಿದಿದ್ದಾರೆ.
ವೈದ್ಯರ ಸಲಹೆ ಇಲ್ಲದೇ ಮಾತ್ರೆಗಳನ್ನು ಯುವಕರಿಗೆ ಮಾರಾಟ ಮಾಡಿರುವುದನ್ನು ಮಾಲೀಕ ಒಪ್ಪಿಕೊಂಡರು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.‘ಕೆಲ ನಿಷೇಧಿತ ಮಾತ್ರೆಗಳನ್ನು ಮಳಿಗೆಯಲ್ಲಿ ಸಂಗ್ರಹಿಸಲಾಗಿದೆ. ಆ ಬಗ್ಗೆ ಔಷಧ ನಿಯಂತ್ರಕರು ಪ್ರತ್ಯೇಕ ತನಿಖೆ ನಡೆಸುತ್ತಿದ್ದಾರೆ. ಮಳಿಗೆಯ ಪರವಾನಗಿ ರದ್ದು ಮಾಡಲು ಅವರೇ ಕ್ರಮ ಕೈಗೊಳ್ಳಲಿದ್ದಾರೆ’ ಎಂದು ಅವರು ತಿಳಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos