ಮುಂಬೈ, ಏ. 17, ನ್ಯೂಸ್ ಎಕ್ಸ್ ಪ್ರೆಸ್: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ 40 ವೀರ ಯೋಧರ ಕುಟುಂಬಕ್ಕೆ ಗಾನಕೋಗಿಲೆ ಲತಾ ಮಗೇಶ್ಕರ್ ಅವರು 1 ಕೋಟಿ ರೂ. ನೀಡಲು ಮುಂದಾಗಿದ್ದರು. ಈಗ ಬಿಎಸ್ಎಫ್ ಕುಟುಂಬಕ್ಕೆ 11 ಲಕ್ಷ ರೂ. ದಾನ ಮಾಡಲು ಮುಂದಾಗಿದ್ದಾರೆ.
ಲತಾ ಮಂಗೇಶ್ಕರ್ ತಮ್ಮ ಸ್ವಂತ ಹಣದಲ್ಲಿ ಎನ್ಜಿಒ ಭಾರತ್ ಕೇ ವೀರ್ ಗೆ 11 ಲಕ್ಷ ರೂ. ದಾನ ಮಾಡಲಿದ್ದಾರೆ ಎಂದು ಹೇಳಿದ್ದಾರೆ. ಗಾನ ಕೋಗಿಲೆ ಒಂದು ಕೋಟಿಯನ್ನು ಹೊರತು ಪಡಿಸಿಯೂ, ಅವರು ಕಾಶ್ಮೀರದ ಕಣಿವೆಯಲ್ಲಿ ಹುತಾತ್ಮರಾದ ಬಿಎಸ್ಎಫ್ ಯೋಧರ ಕುಟುಂಬಕ್ಕೆ 11 ಲಕ್ಷ ರೂ. ದಾನ ಮಾಡಿದ್ದಾರೆ ಎಂದು ಮುಂಬೈನ ಅವಾರ್ಡ್ ಕಾರ್ಯಕ್ರಮವೊಂದರಲ್ಲಿ ಆದಿನಾಥ್ ಮಂಗೇಶ್ಕರ್ ತಿಳಿಸಿದ್ದಾರೆ.ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಅನೇಕ ಯೋಧರ ಕುಟುಂಬಗಳಿಗೆ ಸ್ಟಾರ್ ನಟರು, ಗಾಯಕರು ದಾನ ಮಾಡುತ್ತಿದ್ದಾರೆ.