ಏಕದಿನ ವಿಶ್ವಕಪ್ ಗೆ ಭಾರತ ತಂಡ ಪ್ರಕಟ

ಏಕದಿನ ವಿಶ್ವಕಪ್ ಗೆ ಭಾರತ ತಂಡ ಪ್ರಕಟ

ಬೆಂಗಳೂರು ಸೆ. 5: ಪ್ರತಿಷ್ಠಿತ ಏಕದಿನ ವಿಶ್ವಕಪ್ ಟೂರ್ನಿಗೆ ಅಜಿತ್ ಅಗರ್ಕರ್ ಸಾರಥ್ಯದ ಆಯ್ಕೆ ಮಂಡಳಿಯು ಹಿಟ್‍ಮ್ಯಾನ್ ರೋಹಿತ್ ಶರ್ಮಾ ಸಾರಥ್ಯದ 15 ಸದಸ್ಯರ ಬಲಿಷ್ಠ ತಂಡವನ್ನು ಪ್ರಕಟಿಸಿದ್ದು ಕನ್ನಡಿಗ ಕೆ.ಎಲ್.ರಾಹುಲ್‍ಗೆ ತಂಡದಲ್ಲಿ ಸ್ಥಾನ ಲಭಿಸಿದೆ. ಏಷ್ಯಾಕಪ್ ಟೂರ್ನಿಗೆ ಪ್ರಕಟಿಸಿದ ತಂಡದಲ್ಲೂ ಲೋಕೇಶ್ ರಾಹುಲ್‍ಗೆ ಸ್ಥಾನ ಕಲ್ಪಿಸಲಾಗಿತ್ತಾದರೂ, ಫಿಟ್ನೆಸ್ ಸಮಸ್ಯೆಯಿಂದ ಪಾಕಿಸ್ತಾನ ಹಾಗೂ ನೇಪಾಳ ತಂಡದಿಂದ ಹೊರಗುಳಿದಿದ್ದರೂ ಸೂಪರ್-4 ಸುತ್ತಿಗೆ ಲಭ್ಯವಾಗಿದ್ದಾರೆ.
ತಿಲಕ್‍ವರ್ಮಾ- ಸಂಜು ಸ್ಯಾಮ್ಸನ್ ಔಟ್:
ಏಷ್ಯಾಕಪ್ ಟೂರ್ನಿಗೆ ಪ್ರಕಟಿಸಿದ್ದ ತಂಡದಲ್ಲಿ ಹೊಸ ಮುಖವಾಗಿ ಸ್ಥಾನ ಪಡೆದಿದ್ದ ಯುವ ಆಟಗಾರ ತಿಲಕ್ ವರ್ಮಾ ಹಾಗೂ ಮೀಸಲು ಆಟಗಾರ ಸಂಜು ಸ್ಯಾಮ್ಸನ್‍ರನ್ನು ಏಕದಿನ ವಿಶ್ವಕಪ್ ತಂಡದಿಂದ ಹೊರಗಿಡಲಾಗಿದೆ. ಕನ್ನಡಿಗ ಪ್ರಸಿಧ್ ಕೃಷ್ಣಗೆ ಕೊಕ್ ನೀಡಲಾಗಿದೆ.
ಏಕದಿನ ವಿಶ್ವಕಪ್‍ಗೆ ಭಾರತದ ಬಲಿಷ್ಠ ತಂಡ:
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್.ರಾಹುಲ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ (ಉಪನಾಯಕ), ರವೀಂದ್ರ ಜಡೇಜಾ, ಅಕ್ಸರ್ ಪಟೇಲ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಕುಲದೀಪ್ ಯಾದವ್, ಮೊಹಮ್ಮದ್ ಶಮಿ .

ಫ್ರೆಶ್ ನ್ಯೂಸ್

Latest Posts

Featured Videos