ಅಭಿಮನ್ಯು ನೇತೃತ್ವದ ಕಾರ್ಯಾಚರಣೆ: ಕಾಡಾನೆ ಸೆರೆ!

ಅಭಿಮನ್ಯು ನೇತೃತ್ವದ ಕಾರ್ಯಾಚರಣೆ: ಕಾಡಾನೆ ಸೆರೆ!

ಹಾಸನ: ಪುಂಡಾನೆಗಳ ಸೆರೆ ಕಾರ್ಯಾಚರಣೆ ಹಾಸನದಲ್ಲಿ ಮುಂದುವರಿದಿದೆ. ನಿನ್ನೆ ತಣ್ಣೀರ್‌ ಹೆಸರಿನ ಮತ್ತೊಂದು ಬೃಹತ್ ಗಾತ್ರದ ಬಲಿಷ್ಠ ಆನೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಹಿಡಿದಿದ್ದಾರೆ. ಜನವರಿ 13 ರಂದು ಆಲೂರು ತಾಲ್ಲೂಕಿನ ನಲ್ಲೂರು ಬಳಿ ‌ಒಂದು ಆನೆ‌ ಸೆರೆ ಹಿಡಿದು ಸ್ಥಳಾಂತರ ಮಾಡಿದ್ದ ಅರಣ್ಯ ಇಲಾಖೆ  ನಿನ್ನೆ ತಣ್ಣೀರ್‌ ಹೆಸರಿನ ಮತ್ತೊಂದು ಬೃಹತ್ ಗಾತ್ರದ ಬಲಿಷ್ಠ ಆನೆಯನ್ನು ಸೆರೆಹಿಡಿದಿದೆ.

ದಸರಾ ಆನೆ ಅಭಿಮನ್ಯು ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಎಂಟು ಸಾಕಾನೆಗಳ ಟೀಂ‌ ಮತ್ತೊಂದು ಪುಂಡಾನೆಯನ್ನು ಖೆಡ್ಡಾಕ್ಕೆ ಕೆಡವಿದ್ದು ಆಪರೇಷನ್ ಪುಂಡಾನೆ ಕಾರ್ಯಾಚರಣೆ ಮುಂದುವರೆದಿದೆ. ಬೆಳಿಗ್ಗೆ ಕಾರ್ಯಾಚರಣೆ ಆರಂಭವಾದಾಗಿನಿಂದ ಕಾಡಾನೆ ಸರೆ ಕಾರ್ಯಾಚರಣೆ ತಂಡಕ್ಕೆ ಚಳ್ಳೆಹಣ್ಣು ತಿನ್ನಿಸಿ ಓಡಾಡುತ್ತಿದ್ದ ಸಲಗವನ್ನು ಮದ್ಯಾಹ್ನದ ವೇಳೆಗೆ ಅಭಿಮನ್ಯು ಅಂಡ್ ಟೀಂ ಖೆಡ್ಡಾಕ್ಕೆ ‌ಕೆಡವಿದೆ.

 

ಫ್ರೆಶ್ ನ್ಯೂಸ್

Latest Posts

Featured Videos