ಕರ್ನಾಟಕ ರಾಜ್ಯದ ರುಣಾ ನಾವು ಮರೆಯಲಾರೆವು

ಕರ್ನಾಟಕ ರಾಜ್ಯದ ರುಣಾ ನಾವು ಮರೆಯಲಾರೆವು

ವಿಜಯಪುರ, ಮಾ. 29: ಕರ್ನಾಟಕ ರಾಜ್ಯದ ಗಡಿಭಾಗದಲ್ಲಿ ಸಾವಿರಾರು ಜನರು ಕಾರ್ಮಿಕ ಕೆಲಸ ಮಾಡುವ ಬೆಂಗಳೂರು, ಮಂಗಳೂರು, ಹುಬ್ಬಳ್ಳಿ, ಮೈಸೂರು, ಅನೇಕ ಪಟ್ಟಣದಲ್ಲಿ ರಾಜಸ್ಥಾನ ಮೂಲದ ಜನರು ಸಾವಿರಾರು ಜನರು ಗಡಿಭಾಗದ ಧೂಳಖೇಡ ಚಕ್ ಪೋಸ್ಟ್ ಹತ್ತಿರ ಬಂದು ಇಳಿದ್ದಿದರು.

ಸುಮಾರು ಮೂರು ನಾಲ್ಕು ದಿನ ದಿಂದ ಇಲ್ಲಿಯೇ ಉಳಿದದ್ದು ಅವರನ್ನು ತಮ್ಮ ರಾಜ್ಯಕ್ಕೆ ಕಳಿಸಿ ಕೊಡಲಾಗಿದೆ. 60 ಬಸ್ ಮೂಲಕ 2437 ಜನರಿಗೆ ತಮ್ಮ ಊರುಗಳಿಗೆ ಹೋಗುವ ವ್ಯವಸ್ಥೆ ಮಾಡಿದ ಕರ್ನಾಟಕ ರಾಜ್ಯ ಸರ್ಕಾರ, ವಿಜಯಪುರ ಜಿಲ್ಲಾಧಿಕಾರಿ, ಮತ್ತು ಎಸ್ ಪಿ  ರವರು ಮಾನವೀಯತೆ ಮೆರದಿದ್ದಾರೆ. ಕಳೆದ ಮೂರು ನಾಲ್ಕು ದಿನಗಳಲ್ಲಿ ಊಟದ ವ್ಯವಸ್ಥೆ ಮಾಡಿ ಕಳಸಿ ಕೊಡಲಾಗಿದೆ.

ಅಲ್ಲಿನ ಜನರು ಗೋಳು ಅರ್ತ ಮಾಡಿಕೊಳ್ಳದ ಮಹಾರಾಷ್ಟ್ರ ಸರಕಾರ ವಿರೋಧ ಆಕ್ರೋಶ ವ್ಯಕ್ತಪಡಿಸಿದರು , ಇಲ್ಲಿನ ಜನರು ನಾವು ಭಾರತೀಯರು ನಮ್ಮ ಭಾಷೆ ಹಿಂದಿ ನಾವು ನಮ್ಮ ಭಾವನೆ ಯಾರಿಗೆ ಹೇಳಬೇಕು, ಕನ್ನಡಿಗರು ನಮ್ಮ ಭಾವನೆ ಅರಿತುಕೊಂಡ 60 ಬಸ್ ವ್ಯವಸ್ಥೆ ಮಾಡಿದ್ದಾರೆ, ಇವರಿಗೆ ಎಷ್ಟು ಧನ್ಯವಾದಗಳು ಹೇಳಿದರು ಸಲದು, ನಮಗೆ ಊಟ ವ್ಯವಸ್ಥೆ ಮಾಡಿದರು, ಜೊತೆಗೆ ನಮ್ಮ ಊರಿಗೆ ಹೋಗಲು ಬಸ್  ವ್ಯವಸ್ಥೆ ಮಾಡಿ ಕಳಿಸಿ ಕೊಟ್ಟರು ಕರ್ನಾಟಕ ರಾಜ್ಯದ ರುಣಾ ನಾವು ತೀರಿಸಲಾರೆವು ಎಂದು ತಮ್ಮ ಭಾವನೆ ಮಾಧ್ಯಮ ಮೂಲಕ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ವಿಜಯಪುರ ಜಿಲ್ಲಾಧಿಕಾರಿ ವಾಯ್ ಎಸ್ ಪಾಟೀಲ, ಮತ್ತು ಎಸ್ ಪಿ ಅನುಪಮ ಅಗರವಾಲ್, ಇಂಡಿ ಡಿ ವಾಯ್ ಎಸ್ ಪಿ ಸಂಕದ,ಚಡಚಣ ತಹಶಿಲ್ದಾರರ ಎನ್ ಬಿ ಗೆಜ್ಜೆ, ಚಡಚಣ ಸಿಪಿಐ ಚಿದಂರಮ್ ಮಡಿವಾಳ, ಝಳಕಿ ಪಿ ಎಸ್ ಐ ಪರಶುರಾಮ ಮನಗೂಳಿ, ಕರ್ನಾಟಕ ರಾಜ್ಯದ ಗಡಿಭಾಗ ಧೂಳಖೇಡ, ಚಕ್ ಪೋಸ್ಟ್ ದಿಂದ ರಾಜಸ್ಥಾನ ರಾಜ್ಯಕ್ಕೆ ಈ ಜನರನ್ನು ಬಿಡಲು ಮಾನ್ಯ ಜಿಲ್ಲಾಧಿಕಾರಿ ಮತ್ತು ಎಸ್ ಪಿ ರವರು ನೇತ್ರತ್ವದಲ್ಲಿ ಒಂದು ತಂಡ ಮಾಡಿದ್ದಾರೆ ಅದರಲ್ಲಿಚಡಚಣ ಪಿ ಎಸ್ ಐ ಮಹಾದೇವ ಯಲಗಾರ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಮಹೇಶ ಪೊದ್ದಾರ, 3 ಜನ ಪೋಲೀಸ್ ಸಿಬ್ಬಂದಿ ಇದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos