ಮತದಾರರ ಅಕ್ರೋಶ

ಮತದಾರರ ಅಕ್ರೋಶ

 

ಬೆಂಗಳೂರು, ಡಿ. 5: ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ನಂದಿನಿ ಬಡಾವಣೆಯ ನೂರಕ್ಕೂ ಅಧಿಕ ಮಂದಿ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟಿರುವ ಹಿನ್ನೆಲೆಯಲ್ಲಿ ಮತ ಚಲಾಯಿಸದೆ ಹಿಂದಿರುಗಿದರು.

ಹಲವು ವರ್ಷಗಳಿಂದ ನಂದಿನಿ ಬಡಾವಣೆಯಲ್ಲಿ ವಾಸವಾಗಿದ್ದೇವೆ. ಮನೆ ಬದಲಾವಣೆ ಮಾಡಿಲ್ಲ. ಅಲ್ಲದೆ ಜೀವಂತ ಇದ್ದರೂ ಮೃತಪಟ್ಟಿದ್ದಾರೆ ಎಂದು ಪಟ್ಟಿಯಿಂದ ಹೆಸರು ಬಿಟ್ಟಿದ್ದಾರೆ. ನಾವು ಎಲ್ಲಿಗೆ ಹೋಗಬೇಕು ಎಂದು ಮತದಾರರು ಆಕ್ರೋಶ ವ್ಯಕ್ತಪಡಿಸಿದರು.

ನೂರಕ್ಕೂ ಅಧಿಕ ಮಂದಿ ಮತದಾರರು ಒಂದೆಡೆ ಸೇರಿ ನಾವು ಮತ ಚಲಾಯಿಸಲೆಬೇಕು ಎಂದು ಪಟ್ಟು ಹಿಡಿದರು. ಕೊನೆಗೆ ಡಿಸಿಪಿ ಶಶಿಕುಮಾರ್ ಹಾಗೂ ಚುನಾವಣಾ ಆಯೋಗದ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಮತದಾರರ ಮನವೊಲಿಸಿದರು

 

ಫ್ರೆಶ್ ನ್ಯೂಸ್

Latest Posts

Featured Videos