ರಚನೆಗೆ ಸಂಪುಟ ಅನುಮೋದನೆ

ರಚನೆಗೆ ಸಂಪುಟ ಅನುಮೋದನೆ

ಕೋಲಾರ: ವೇಮಗಲ್-ಕುರಗಲ್ ಪಟ್ಟಣ ಪಂಚಾಯಿತಿ ರಚನೆಗೆ ಒಪ್ಪಿಗೆ ನೀಡಿರುವ ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿಗಳು ಹಾಗೂ ಸಂಪುಟ ಸದಸ್ಯರಿಗೆ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಜನರ ಪರವಾಗಿ ಧನ್ಯವಾದ ಸಲ್ಲಿಸಿದ್ದಾರೆ.

ಶನಿವಾರ ನಡೆದ ಸಚಿವ ಸಂಪುಟದಲ್ಲಿ ವೇಮಗಲ್-ಕುರಗಲ್ ಪಟ್ಟಣ ಪಂಚಾಯಿತಿ ರಚನೆಗೆ ಒಪ್ಪಿಗೆ ಸಿಗುತ್ತಿದ್ದಂತೆ ತಮ್ಮ ಮನವಿ ಹಾಗೂ ಒಂದು ವರ್ಷದ ಪ್ರಯತ್ನಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು ಮತ್ತು ಸರ್ಕಾರಕ್ಕೆ ಧನ್ಯವಾದ ಸಲ್ಲಿಸಿರುವ ಅವರು, ಬೆಂಗಳೂರಿನ ಮೇಲೆ ಒತ್ತಡ ಕಡಿಮೆ ಮಾಡುವ ಹಿನ್ನಲೆಯಲ್ಲಿ ರಾಜಧಾನಿಯ ಹೊರವಲಯದಲ್ಲಿ ಚಿಕ್ಕಪಟ್ಟಣಗಳ ಅಭಿವೃದ್ದಿ ಅಗತ್ಯವಾಗಿದೆ. ರಾಜಧಾನಿಗೆ ಒಂದು ಗಂಟೆ ಅವಧಿಯಲ್ಲಿ ತಲುಪುವ ಅಂತರದಲ್ಲಿ ವೇಮಗಲ್ ಇದೆ ಎಂದು ತಿಳಿಸಿರುವ ಅವರು, ಇದು ಜಿಲ್ಲೆಯ ಏಕೈಕ ಪಟ್ಟಣ ಪಂಚಾಯಿತಿಯಾಗಲಿದೆ ಎಂದು ತಿಳಿಸಿದ್ದಾರೆ.
ಇಲ್ಲಿನ ಅಭಿವೃದ್ದಿ ಜತೆಗೆ ವೇಮಗಲ್ ಕೈಗಾರಿಕಾ ಪ್ರದೇಶ ದೊಡ್ಡಮಟ್ಟದಲ್ಲಿ ಅಭಿವೃದ್ದಿಯಾಗಲಿ ಎಂಬ ದೃಷ್ಟಿಯಿಂದ ಪಟ್ಟಣ ಪಂಚಾಯಿತಿ ರಚನೆಗೆ ಪ್ರಯತ್ನ ಮಾಡಿದ್ದಾಗಿ ತಿಳಿಸಿದ್ದಾರೆ.
ಮುಖ್ಯಮಂತ್ರಿಗಳು ತಮ್ಮ ಮನವಿಗೆ ಸ್ಪಂದಿಸಿ ನೀಡಿದ ನಿರ್ದೇಶನದ ಅನ್ವಯ ಪೌರಾಡಳಿತ ನಿರ್ದೇಶನಾಲಯವು ಪೌರಾಡಳಿತ ಸಚಿವರು, ಸಚಿವಾಲಯ,ನಿರ್ದೇಶಕರು, ಗ್ರಾಮೀಣಾಭಿವೃದ್ದಿ ಸಚಿವರು ಮತ್ತು ಸಚಿವಾಲಯದ ಅನುಮತಿ ಪಡೆದು ಹಣಕಾಸು ಇಲಾಖೆಗೆ ಒಪ್ಪಿಗೆಗೆ ಕಳುಹಿಸಿದ್ದು, ಇದೀಗ ಸಚಿವ ಸಂಪುಟವೂ ಅನುಮೋದಿಸಿದೆ.

 

ಫ್ರೆಶ್ ನ್ಯೂಸ್

Latest Posts

Featured Videos