ಚಿತ್ರದುರ್ಗ ಸೆ. 27 : ಸಹಪಾಠಿಗೆ ವಿದ್ಯಾರ್ಥಿಯೊಬ್ಬ ಬಾಟಲಿನ ಗ್ಲಾಸ್ ನಿಂದ ಚುಚ್ಚಿ ಓಡಿಹೋಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದಲ್ಲಿ ಘಟನೆ ನಡೆದೆ. ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯನ್ನು ನವೀನ್ ಎಂದು ಗುರುತಿಸಲಾಗಿದೆ.ಹಿರಿಯೂರು ನಗರದ ಡಾ. ಅಂಬೇಡ್ಕರ್ ರಮಾಬಾಯಿ ಪ್ರೌಢಶಾಲೆಯಲ್ಲಿ ಎಸ್ಎಸ್ಎಲ್ಸಿ ಓದುತ್ತಿರುವ ವಿದ್ಯಾರ್ಥಿಗಳಾದ ಭರತ್ ಹಾಗೂ ನವೀನ್ ಇಬ್ಬರೂ ಒಟ್ಟಿಗೆ ಹೊರಗೆ ಹೋಗಿದ್ದರು. ಅದೇನಾಯಿತೋ ಗೊತ್ತಿಲ್ಲ ಜಗಳವಾಡಿಕೊಂಡಿದ್ದಾರೆ. ಬಳಿಕ ನವೀನ್ ತುಂಬ ಕೋಪಗೊಂಡು ಭರತ್ಗೆ ಬಾಟಲಿಯ ಗ್ಲಾಸ್ನಿಂದ ಚುಚ್ಚಿ ಓಡಿಹೋಗಿದ್ದಾನೆ. ಅಲ್ಲಿಂದ ನಗರದ ಹೊರವಲಯಕ್ಕೆ ಹೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.