ಸಿಎಂ, ಡಿಸಿಎಂ ಎದುರು ರಮೇಶ್ ಕುಮಾರ್, ಮುನಿಯಪ್ಪ ನಡುವೆ ಮಾತಿನ ಚಕಮಕಿ

ಸಿಎಂ, ಡಿಸಿಎಂ ಎದುರು ರಮೇಶ್ ಕುಮಾರ್, ಮುನಿಯಪ್ಪ ನಡುವೆ ಮಾತಿನ ಚಕಮಕಿ

ಬೆಂಗಳೂರು: ಕೋಲಾರ ಟಿಕೆಟ್ ಆಕಾಂಕ್ಷಿಯಾಗಿರುವ ರಾಜ್ಯ ಸಭೆ ಮಾಜಿ ಸದಸ್ಯ ಎಲ್ ಹನುಮಂತಯ್ಯ ಅವರು ಕೆಪಿಸಿಸಿ ಪ್ರಚಾರ ಸಮಿತಿ ಸಹ ಅಧ್ಯಕ್ಷರನ್ನಾಗಿ ನೇಮಕ ಮಾಡಿದ ಬೆನ್ನಲ್ಲಿ ಕೋಲಾರ ಮೀಸಲು ಕ್ಷೇತ್ರದ ಟಿಕೆಟ್ ವಿಚಾರ ಮತ್ತೊಮ್ಮೆ ತಿರುವು ಪಡೆದುಕೊಂಡಿದೆ.

ಇದರ ಬೆನ್ನಲ್ಲೇ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಸಂಜೆ ಮಾಜಿ ಸ್ಪೀಕರ್ ಕೆ ಆರ್ ರಮೇಶ್ ಕುಮಾರ್ ಹಾಗೂ ಆಹಾರ ಸಚಿವ ಕೆ ಹೆಚ್ ಮುನಿಯಪ್ಪ ಮುಖಾಮುಖಿಯಾಗಿದ್ದರು.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನಾಯಕರ ಮಧ್ಯೆ ಇರುವ ಧ್ವೇಷವನ್ನು ಶಮನಗೊಳಿಸುವ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್​ ಕೋಲಾರದಲ್ಲಿ ನಡೆದ ಸಂಧಾನ ಸಭೆ ನಡೆಸಿದರು. ಸಭೆಯಲ್ಲಿ ರಮೇಶ್​​ ಕುಮಾರ್​ ಮತ್ತು ಕೆ.ಹೆಚ್​ ಮುನಿಯಪ್ಪ ಮುಖಾಮುಖಿಯಾಗಿದ್ದರು.

ಈ ಸಂಧಾನ ಸಭೆಯಲ್ಲೂ ಇಬ್ಬರು ನಾಯಕರು ಪರಸ್ಪರ ಕಿತ್ತಾಡಿಕೊಂಡಿದ್ದಾರೆ. ಇಬ್ಬರು ನಾಯಕರು ತಮ್ಮ ಹಳೆಯ ಚುನಾವಣೆಗಳ ಸೋಲಿಗೆ ಕಾರಣವೇನು ಎಂಬುವುದರ ಕುರಿತು ಪಟ್ಟಿ ಬಿಚ್ಚಿಟ್ಟರು. ತಮ್ಮ ತಮ್ಮ ಸೋಲಿಗೆ ಪರಸ್ಪರ ಆರೋಪ ಪ್ರತ್ಯಾರೋಪಗಳ ಸುರಿಮಳೆ ಗೈದರು. ವಿರೋಧಿಗಳ ಮನೆಯಲ್ಲಿ ಹೋಗಿ ಕುಳಿತಿರಲಿಲ್ವಾ ಎಂದು ಪರಸ್ಪರ ಮುನಿಯಪ್ಪ ಮತ್ತು ರಮೇಶ್ ಕುಮಾರ್ ಆರೋಪ ಮಾಡಿದರು.

 

ಫ್ರೆಶ್ ನ್ಯೂಸ್

Latest Posts

Featured Videos