ಫೆ.28, ನ್ಯೂಸ್ ಎಕ್ಸ್ ಪ್ರೆಸ್, ಇಸ್ಲಮಾಬಾದ್: ವಿಂಗ್ ಕಮಾಂಡರ್ ಅವರನ್ನು ಸ್ನೇಹ ಸಂಬಂಧದ ಮೇಲೆ ನಾಳೆ ಬಿಡುಗಡೆ ಮಾಡುವುದಾಗಿ ಪಾಕ್ ಪ್ರಧಾನಿ ತಿಳಿಸಿದ್ದಾರೆ. ಇಂದು ಪಾಕ್ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ಇಮ್ರಾನ್ ಖಾನ್, ನಮ್ಮ ಸೆರೆಯಲ್ಲಿರುವ ಭಾರತದ ಪೈಲಟ್ ವಿಂಗ್ ಕಮಾಂಡರ್ ಅವರನ್ನು ಶಾಂತಿ ದ್ಯೋತಕವಾಗಿ ಬಿಡುಗಡೆ ಮಾಡುತ್ತೆವೆ ಎಂದು ತಿಳಿಸಿದ್ದಾರೆ.
ನಿನ್ನೆ ಭಾರತದ ಗಡಿ ಪ್ರವೇಶಿಸಿದ್ದ ಪಾಕ್ನ ಜೆಟ್ ವಿಮಾನವನ್ನು ಭಾರತದ ವಿಮಾನಗಳು ಹೊಡೆದುರುಳಿಸಿದ್ದವು. ಈ ವೇಳೆ ಪಾಕ್ ದಾಳಿಗೆ ಸಿಲುಕಿದ್ದ ವಿಮಾನವು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಹೋಗಿ ಬಿದ್ದಿತ್ತು. ಈ ವೇಳೆ, ಅಲ್ಲಿನ ಸೇನೆ ಅವರನ್ನು ಬಂಧಿಸಿ, ಅವರ ವೀಡಿಯೋ ಕೂಡ ಮಾಡಿತ್ತು. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಜಿನೇವಾ ಒಪ್ಪಂದವನ್ನು ಉಲ್ಲಂಘಿಸಿದೆ ಅನ್ನೋ ಬಲವಾದ ಆರೋಪ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೇಳಿ ಬಂದಿತ್ತು. ಇನ್ನೊಂದೆಡೆ ಭಾರತ ಕೂಡ, ಪಾಕಿಸ್ತಾನದ ಯಾವುದೇ ತಂತ್ರಗಳಿಗೂ ಮಣಿಯದೇ ಜಿನೇವಾ ಒಪ್ಪಂದದಂತೆ ನಮ್ಮ ವಿಂಗ್ ಕಮಾಂಡರ್ ಅವರನ್ನು ಬಿಡುಗಡೆ ಮಾಡಬೇಕು ಅಂತಾ ಬಲವಾಗಿ ಆಗ್ರಹಿಸಿತ್ತು. ಈ ಹಿನ್ನೆಲೆಯಲ್ಲಿ, ಕೊನೆಗೂ ಭಾರತದ ಬಿಗಿ ಕ್ರಮ, ಇನ್ನೊಂದೆಡೆ ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದಿರುವ ಪಾಕಿಸ್ತಾನ ವಿಂಗ್ ಕಮಾಂಡರ್ ಅವರನ್ನು ಬಿಡುಗಡೆ ಮಾಡುವುದಾಗಿ ಇಂದು ಘೋಷಿಸಿದೆ.