ಮಹದೇವಸ್ವಾಮಿಗೆ ಇಂದು ಬೇಲಾ? ಜೈಲಾ?

ಮಹದೇವಸ್ವಾಮಿಗೆ ಇಂದು ಬೇಲಾ? ಜೈಲಾ?

ಚಾಮರಾಜನಗರ. ಡಿ. 2 : ಚಾಮರಾಜನಗರ ಜಿಲ್ಲೆಯ ಸುಳ್ವಾಡಿ ವಿಷ ಪ್ರಸಾದ ದುರಂತದಲ್ಲಿ 17 ಜನ ಮೃತಪಟ್ಟಿದ್ದರು, 129 ಮಂದಿ ಅಸ್ವಸ್ಥರಾದ ಘಟನೆ ನಡೆದಿತ್ತು. ಇಂದು ಈ ಕುರಿತು ಸುಪ್ರಿಂಕೋರ್ಟಿನ ತ್ರಿ ಸದಸ್ಯ ಪೀಠದ ಮುಂದೆ ಅರ್ಜಿ ವಿಚಾರಣೆ ನಡೆಯಲಿದೆ. ಮಹದೇವಸ್ವಾಮಿಗೆ ಜಾಮೀನು ಸಿಗಲಿದೆಯಾ ಅಥವಾ ಜೈಲುಶಿಕ್ಷೆ ಆಗಲಿದೆಯಾ? ಎಂಬುದು ಇಂದು ನಿರ್ಧಾರವಾಗಲಿದೆ. ನ್ಯಾಯಾಧೀಶರುಗಳಾದ ಎನ್.ವಿ ರಮಣ, ಅಜಯ್ ರಸ್ಟೋಗಿ, ಮತ್ತು ರಾಮ ಸುಬ್ರಮಣ್ಯ ನೇತೃತ್ವದ ತ್ರಿಸದಸ್ಯ ಪೀಠದಲ್ಲಿ ವಿಚಾರಣೆ ನಡೆಯಲಿದೆ. ಸುಳ್ವಾಡಿ ದೇವಸ್ಥಾನದ ಪ್ರಸಾದಕ್ಕೆ ವಿಷ ಬೆರೆಸಿದ್ದ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು.

ಅದಾದ ನಂತರ ಪ್ರಸಾದದ ಮೇಲೂ ಜನರು ಅನುಮಾನ ಪಡುವಂತಾಗಿತ್ತು.
ಈ ಪ್ರಕರಣದ ಪ್ರಮುಖ ಆರೋಪಿ ಹಾಗೂ ಕಿರಿಯ ಸ್ವಾಮೀಜಿ ಇಮ್ಮಡಿ ಮಹದೇವಸ್ವಾಮಿ ಅವರ ಜಾಮೀನು ಅರ್ಜಿ ವಿಚಾರಣೆ ಇಂದು ಸುಪ್ರೀಂಕೋರ್ಟ್ನಲ್ಲಿ ನಡೆಯಲಿದೆ. ನ್ಯಾ.ಎನ್.ವಿ. ರಮಣ, ನ್ಯಾ. ಅಜಯ್ ರೋಹ್ಟಗಿ, ವಿ. ರಾಮಸುಬ್ರಮಣ್ಯಂ ನೇತೃತ್ವದ ತ್ರಿಸದಸ್ಯ ಪೀಠ ಇಂದು ಅರ್ಜಿ ವಿಚಾರಣೆ ನಡೆಸಲಿದೆ. ಸ್ಥಳೀಯ ಕೋರ್ಟ್ ಮತ್ತು ಹೈಕೋರ್ಟ್ನಲ್ಲಿ ಇಮ್ಮಡಿ ಮಹದೇವಸ್ವಾಮಿ ಅವರ ಜಾಮೀನು ಅರ್ಜಿ ತಿರಸ್ಕೃತಗೊಂಡಿದೆ. ಹೀಗಾಗಿ, ನ. 21ರಂದು ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.

ಫ್ರೆಶ್ ನ್ಯೂಸ್

Latest Posts

Featured Videos