ಚಿಂತನಾ ಕಾರ್ಯಾಗಾರ ಮುಂದೂಡಿಕೆ

ಚಿಂತನಾ ಕಾರ್ಯಾಗಾರ ಮುಂದೂಡಿಕೆ

ಪಿರಿಯಾಪಟ್ಟಣ: ಕರ್ನಾಟಕ ದಲಿತ ಚಳುವಳಿ ಕಾರ್ಯಕರ್ತರಿಗಾಗಿ ಚಿಂತನಾ ಕಾರ್ಯಗಾರವನ್ನು ಜ ೯ಮತ್ತು ೧೦ ಕ್ಕೆ ಮುಂದೂಡಲಾಗಿದೆ ಎಂದು ಕರ್ನಾಟಕ ದಲಿತ ಚಳುವಳಿ ನವನಿರ್ಮಾಣ ವೇದಿಕೆ ಮುಖಂಡರಾದ ಟಿ ಈರಯ್ಯ ತಿಳಿಸಿದ್ದಾರೆ.
ನೀಡಿರುವ ಹೇಳಿಕೆಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಹಾಗೂ ಕೆಎಸ್‌ಆರ್‌ಟಿಸಿ ನೌಕರರ ಮುಷ್ಕರದಿಂದ ಕಾರ್ಯಗಾರಕ್ಕೆ ಕಾರ್ಯಕರ್ತರು ಭಾಗವಹಿಸಲು ವಿವಿಧ ರೀತಿಯಲ್ಲಿ ತೊಂದರೆ ಯಾದ ಪರಿಣಾಮ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವಿವರಿಸಿದ್ದಾರೆ.
ಹುಣಸೂರಿನ ಡಿಡ್ ಸಂಸ್ಥೆ ಆವರಣದಲ್ಲಿ ಊಟ ಮತ್ತು ವಸತಿ ಸೌಲಭ್ಯ ದೊಂದಿಗೆ ೨ ದಿನ ಕಾರ್ಯಗಾರ ನಡೆಯಲಿದೆ ಎಂದಿರುವ ಅವರು ಡಿ ೧೨ ಮತ್ತು ೧೩ರಂದು ನಡೆಯಬೇಕಾಗಿದ್ದ ಈ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ತಿಳಿಸಿದ್ದಾರೆ.
ಪ್ರೊಫೆಸರ್ ಎಚ್ ಗೋವಿಂದಯ್ಯ. ಪಿ ಸಂಬಯ್ಯ. ಡಾ ಡಿ ಮುರಳಿಧರ್. ಎನ್ ಎಸ್ ಶಂಕರ್. ಡಿ ಭರತ್ ಕುಮಾರ್. ಬಿಎಚ್ ಗಂಗಾಧರ್. ದೊರೆ ರಾಜ. ಎಸ್ ಚಂದ್ರಶೇಖರ್. ಹರಿಹರ ಆನಂದಸ್ವಾಮಿ. ಎಸ್ ಶ್ರೀಕಾಂತ್. ಕೃಷ್ಣಯ್ಯ. ಅಣ್ಣಯ್ಯ. ಪಿ ಮಹದೇವ್. ಎಚ್ ಡಿ ರಮೇಶ್. ಆರ್ ಡಿ ಮಹದೇವ್. ಮೋಹನ್. ಬಾಳೆಕಟ್ಟೆ ರಾಜಯ್ಯ. ರವರ ಸಮ್ಮುಖದಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು ಎಂದು ಈರಯ್ಯ ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos