ಕೆ.ಆರ್.ಪುರ:ಡಿ.ಜೆ.ಹಳ್ಳಿ, ಕೆ.ಜೆ.ಹಳ್ಳಿ ಘಟನೆ ಹಾಗು ಅಲ್ಲಿ ನಡೆದ ಮಾದ್ಯಮದವರ ಮೇಲಿನ ಹಲ್ಲೆಗೆ ಕಾರಣರಾದವರನ್ನು ಕಠಿಣ ಶಿಕ್ಷೆಗೆ ಗುರಿ ಪಡಿಸಬೇಕೆಂದು ಕರ್ನಾಟಕ ಸಮತಾ ಸೈನಿಕ ಧಳ ರಾಜ್ಯವಾದ್ಯ ಎಂ.ವೆಂಕಟಸ್ವಾಮಿ ಒತ್ತಾಯಿಸಿದರು.
ಕ್ಷೇತ್ರದ ತಾಲ್ಲೂಕು ಕಛೇರಿಯ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಪುತ್ತಳಿ ಬಳಿ ಹಮ್ಮಿಕೊಳ್ಳಲಾಗಿದ್ದ ಯುವ ಮುಖಂಡ ಕೆ.ಅರುಣ್ ಹುಟ್ಟು ಹಬ್ಬ ಆಚರಣೆಯಲ್ಲಿ ಪಾಲ್ಗೊಂಡ ಅವರು ಮಾತನಾಡಿದರು. ಕೆಜಿ ಹಳ್ಳಿ ಹಾಗೂ ಡಿಜೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ ಕಿಡಿಗೇಡಿಗಳನ್ನು ಬಂಧಿಸಿ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದರು.
ಈ ಘಟನೆಗೆ ಕಾರಣರಾದವರು ಹಾಗು ಇದಕ್ಕೆ ಪ್ರೇರೇಪಣೆ ಮಾಡಿದವರ ವಿರುದ್ದ ಸಿಓಡಿ ತನಿಖೆ ಮಾಡುವಂತೆ ರಿಪಬ್ಲಿಕ್ ಪಾರ್ಟಿ ವತಿಯಿಂದ ಒತ್ತಾಯಿಸಲಾಗಿದೆ ಎಂದರು. ಕೆ.ಆರ್.ಪುರ ಭಾಗದಲ್ಲಿ ಕೆ.ಅರುಣ್ ನೇತೃತ್ವದಲ್ಲಿ ಆರ್.ಪಿ.ಐ ಬಲಿಷ್ಟವಾಗಿ ಬೆಳೆಯುತ್ತಿದ್ದು ಬರುವ ಪಾಲಿಕೆ ಚುನಾವಣೆಯಲ್ಲಿ ಎಲ್ಲಾ ವಾರ್ಡ್ಗಳಿಗೆ ಆರ್.ಪಿ.ಐ ಪಕ್ಷದಿಂದ ಅಭ್ಯರ್ಥಿಗಳು ಕಣಕ್ಕೆ ಇಳಿಸಲಾಗುವುದೆಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ಅರುಣ್ರವರ ನೂರಾರು ಅಭಿಮಾನಿಗಳು ಹಾಜರಿದ್ದರು.