ಚೆನ್ನೈ, ನ. 13 : ಕೆರೆಯಲ್ಲಿ ಈಜಲು ಹೋಗಿದ್ದ ಬಾಲಕನಿಗೆ ಮೊಸಳೆ ಹಿಡಿಯಲಿಲ್ಲ, ಬದಲಾಗಿ ಪುಟ್ಟ ಮೀನು ಬಾಲಕನಿಗೆ
ಜೀವಕ್ಕೆ ಕುತ್ತು ತಂದಿರುವ ಘಟನೆ ಚನ್ನೈನಲ್ಲಿ ನಡೆದಿದೆ.
ಅರುಲ್ಕುಮಾರ್ ಈತ ತಮಿಳುನಾಡಿನ ಪುದುಕೊಟ್ಟೈ ಜಿಲ್ಲೆಯ ಅನ್ನಾವಸಲ್ ಪ್ರದೇಶದ ನಿವಾಸಿ. 7ನೇ ತರಗತಿ ಓದುತ್ತಿದ್ದ ಅರುಲ್ಕುಮಾರ್ಗೆ ಈಜುವುದೆಂದರೆ ಬಹಳ ಇಷ್ಟ. ಶಾಲೆ ಮುಗಿಸಿ ಕೆರೆಯೊಂದಕ್ಕೆ ಈಜಲು ಹೋಗಿದ್ದ. ಕೆರೆಯಲ್ಲಿ ಈಜುತ್ತಿದ್ದಾಗ ಇದ್ದಕ್ಕಿದ್ದಂತೆ ಉಸಿರಾಟದ ತೊಂದರೆ ಶುರುವಾಯಿತು. ತಕ್ಷಣ ಅರುಲ್ ಕೆರೆಯಿಂದ ಹೊರಗೆ ಬಂದ. ಉಸಿರಾಡಲು ಆಗುತ್ತಿಲ್ಲ, ಮೂಗು ಕಟ್ಟಿದಂತೆ ಆಗುತ್ತಿದೆಂದು ಮನೆಯಲ್ಲಿ ತನ್ನ ಪೋಷಕರ ಬಳಿ ನಡೆದ ಘಟನೆ ವಿವರಿಸಿದ.
ಗಾಬರಿಗೊಂಡ ಪೋಷಕರು ಅರುಲ್ನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದರು. ಸದ್ಯ ಅರುಲ್ ಪ್ರಾಣಾಪಾಯದಿಂದ ಪಾರಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾನೆ. ಮೂಗಿನ ನೋವು ಕಡಿಮೆಯಾಗಿದೆ. ಆತ ಆರಾಮಾಗಿ ಉಸಿರಾಡಬಹುದಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.