ಔರಾದ: ಪಟ್ಟಣದ ಆದರ್ಶ ಮಹಾವಿದ್ಯಾಲಯದಲ್ಲಿ ಬುಧವಾರ ವಿಧಾನಪರಿಷತ್ ಸದಸ್ಯ ವಿಜಯ್ಸಿಂಗ್ ಅವರು 2.49 ಲಕ್ಷ ರೂ ವೆಚ್ಚದಲ್ಲಿ ನಿರ್ಮಿತಗೊಂಡ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿದರು.
ಈ ವೇಳೆ ಮಾತನಾಡಿ, ನೀರು ಅಮೃತ ಸಮಾನ. ಕಲುಷಿತದಿಂದ ಕೂಡಿದ ನೀರಿನ ಸೇವನೆ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಪ್ರತಿಯೊಬ್ಬರು ಗುಣಮಟ್ಟದ ನೀರನ್ನು ಕುಡಿಯಬೇಕೆಂದರು.
ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಧೂಳಪ್ಪಾ ಮಳನೂರೆ, ಮಾಹಾದೇವ ಚಿಟಗಿರೆ, ಶೇಷರಾವ ಬಿರಾದಾರ, ಓಂಕಾರ ಹೋಸಹಳ್ಳಿ, ದೋಡಸಿತಳವಾರ, ಬಸವಕುಮಾರ ಮುದ್ದಾಳೆ, ನಾಗನಾಥ ಸುರಂಗೆ, ಸುಧಾಕರ್ ಕೊಳ್ಳುರ್, ದತ್ತಾತ್ರಿಬಾಪೂರೆ ಕೋಳ್ಳುರ, ರತಿಕಾಂತಮಜಗೆ ಸೇರಿದಂತೆ ಇತರೆ ಪಕ್ಷದ ಪದಾಧಿಕಾರಿಗಳು, ಶಾಲೆಯ ಸಿಬ್ಬಂದಿ, ವಿದ್ಯಾರ್ಥಿಗಳು, ಉಪಸ್ಥಿತರಿದ್ದರು.